ಕರ್ನಾಟಕ

karnataka

ETV Bharat / state

ಸುಡು ಬಿಸಿಲಿನಲ್ಲೂ ಕಾರ್ಯಪ್ರವೃತ್ತರಾದ ಅಧಿಕಾರಿಗಳು.. ಸಾರ್ವಜನಿಕರ ಮೆಚ್ಚುಗೆ

ಲೋಕಸಭಾ ಚುನಾವಣೆ ಹಿನ್ನೆಲೆ ಅಧಿಕಾರಿಗಳು ಸುಡು ಬಿಸಿಲಿನಲ್ಲಿಯೂ ಕಾರ್ಯಪ್ರವೃತ್ತರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

By

Published : Mar 16, 2019, 11:04 AM IST

ಅಧಿಕಾರಿಗಳು

1kn-ckb-0315-bordercheckpost_15032019204434_1503f_02198_604.mp4

ಚಿಕ್ಕಬಳ್ಳಾಪುರ : ಒಂದು ಕಡೆ ಲೋಕಸಭಾ ಚುನಾವಣೆ ದಿನೆ ‌ದಿನೇ ರಂಗೇರುತ್ತಿದೆ. ಇತ್ತ ಸರ್ಕಾರಿ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಸುಡು ಬಿಸಿಲಿನಲ್ಲಿಯೂ ವಾಹನ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳು ಗಡಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ವಾಹನ ತಪಾಸಣೆ ಚುರುಕುಗೊಂಡಿದೆ. ಗಡಿ ಪ್ರಾಂತ್ಯಗಳಲ್ಲಿ ವಾಹನ ಸಂಚಾರವು ಅಧಿಕವಾಗಿರುತ್ತದೆ. ಇದರ ಸಲುವಾಗಿ ಜಿಲ್ಲಾಡಳಿತ ಗಡಿ ಪ್ರಾಂತ್ಯಗಳಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಿದೆ. ಹಗಲು, ರಾತ್ರಿ ಎನ್ನದೇ ವಾಹನಗಳ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು ಬಂದ ವಾಹನಗಳನ್ನು ಎಡೆಬಿಡದೇ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನೂ ಬಿಸಿಲಿನ ತಾಪವೂ ಹೆಚ್ಚಾಗಿರುವುದರಿಂದ ಅಧಿಕಾರಿಗಳು ಬಿಸಿಲಿಗೆ ಬೆಂದು ಸುಸ್ತಾಗುತ್ತಿದ್ದಾರೆ. ಸದ್ಯ ಬೇಸಿಗೆಯೂ ಆರಂಭವಾದರಿಂದ ಬಿಸಿಲಿನ ತಾಪವು ಹೆಚ್ಚಾಗಿದೆ. ಆದರೂ ಅಧಿಕಾರಿಗಳು ಮಾತ್ರ ವಾಹನ ತಪಾಸಣೆ ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಾಹನ ತಪಾಸಣೆ ನಡೆಸುತ್ತಿರುವ ಅಧಿಕಾರಿಗಳು

For All Latest Updates

TAGGED:

ABOUT THE AUTHOR

...view details