ಕರ್ನಾಟಕ

karnataka

By

Published : Jan 29, 2022, 7:50 AM IST

ETV Bharat / state

ನಂದಿಬೆಟ್ಟದಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ: ಬೀದಿಗೆ ಬಂದ ಸಣ್ಣಪುಟ್ಟ ವ್ಯಾಪಾರಸ್ಥರ ಬದುಕು

ರಾಜ್ಯದಲ್ಲಿ ಎಲ್ಲದಕ್ಕೂ ರಿಲೀಫ್ ಸಿಕ್ಕಿದೆ. ಆದರೆ ವಿಶ್ವವಿಖ್ಯಾತ ನಂದಿ ಬೆಟ್ಟಕ್ಕೆ ಮಾತ್ರ ರಿಲೀಫ್ ಸಿಗುತ್ತಿಲ್ಲ. ಇದರಿಂದಾಗಿ ಸಣ್ಣಪುಟ್ಟ ವ್ಯಾಪಾರಸ್ಥರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬಿದ್ದಂತಾಗಿದೆ.

ನಂದಿಬೆಟ್ಟದಲ್ಲಿ ವೀಕೆಂಡ್​  ಕರ್ಫ್ಯೂ ಜಾರಿ
ನಂದಿಬೆಟ್ಟದಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ

ಚಿಕ್ಕಬಳ್ಳಾಪುರ: ಕೋವಿಡ್-19 ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್​ ಕರ್ಫ್ಯೂ ಘೋಷಿಸಿದ್ದರಿಂದ ನಂದಿ ಬೆಟ್ಟದ ಬಳಿ ಇರುವ ವ್ಯಾಪಾರಿಗಳ ಬದುಕು ಅಡಕತ್ತರಿಗೆ ಸಿಲುಕಿದಂತಾಗಿದೆ.

ಹೌದು, ಕೊರೊನಾದಿಂದಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್​ ಕರ್ಫ್ಯೂ ಕೂಡ ಜಾರಿ ಮಾಡಲಾಗಿತ್ತು. ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ತೆಗೆದು ಹಾಕಿದೆ. ರಾಜ್ಯದಲ್ಲಿ ಎಲ್ಲದಕ್ಕೂ ರಿಲೀಫ್ ಸಿಕ್ಕಿದೆ. ಆದ್ರೆ ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಮಾತ್ರ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ. ಇದರಿಂದಾಗಿ ಸಣ್ಣಪುಟ್ಟ ವ್ಯಾಪಾರಸ್ಥರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬಿದ್ದಂತಾಗಿದೆ.

ಕೊರೊನಾದಿಂದ ಬೀದಿಗೆ ಬಂದ ಸಣ್ಣಪುಟ್ಟ ವ್ಯಾಪಾರಸ್ಥರ ಬದುಕು

ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಳ್ಳುವ ಚಿಕ್ಕಬಳ್ಳಾಪುರದ ತಪ್ಪಲ್ಲಿನಲ್ಲಿರುವ ಪ್ರಸಿದ್ಧ ನಂದಿ ಬೆಟ್ಟಕ್ಕೆ ಪ್ರವಾಸಿಗರು ಬಂದು ನಿರಾಸೆಯಿಂದ ವಾಪಸಾಗುತ್ತಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳ ಬಳಿ ಹೋಗಿ ನಂದಿ ಬೆಟ್ಟ ಓಪನ್ ಮಾಡಿ, ಇಲ್ಲ ಅಂದ್ರೆ ಸ್ವಲ್ಪ ವಿಷ ಕೊಡಿ ಅಂತಾ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿ, ಇನ್ನೆರಡು ವಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ.

ಕಳೆದ ವರ್ಷ ಆಗಸ್ಟ್ 24 ರಂದು ಗುಡ್ಡಕುಸಿದು ರಸ್ತೆ ಹಾಳಾಗಿತ್ತು. ಅಂದಿನಿಂದ ಇಂದಿನವರೆಗೂ ವೀಕೆಂಡ್ ಕರ್ಫ್ಯೂ ಮುಂದುವರೆದಿದೆ. ನಂದಿ ಬೆಟ್ಟಕ್ಕೆ ಮಾಮೂಲಿ ದಿನಗಳಲ್ಲಿ ಎರಡು, ಮೂರು ಸಾವಿರ ಜನ ಪ್ರವಾಸಿಗರು ಬರುತ್ತಾರೆ. ವೀಕೆಂಡ್​ನಲ್ಲಿ 10 ರಿಂದ 15 ಸಾವಿರ ಜನ ಪ್ರವಾಸಿಗರು ಬರುತ್ತಾರೆ.

ಬೆಟ್ಟದ ಮೇಲೆ ಜನಜಂಗುಳಿ ಆಗುತ್ತದೆ, ಪಾರ್ಕಿಂಗ್ ಸ್ಥಳ ನೋಡಿಕೊಂಡು ಆನ್​ಲೈನ್ ಬುಕಿಂಗ್​ಗೆ ಅವಕಾಶ ಕೊಡುತ್ತೇವೆ. ಇನ್ನೆರಡು ವಾರಗಳಲ್ಲಿ ಎಲ್ಲವೂ ಬಗೆಹರಿಸಿ ಪ್ರವಾಸಿಗರ ಮುಕ್ತ ಅವಕಾಶಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಜಿಲ್ಲಾಕಾರಿ ಆರ್ ಲತಾ ಹೇಳಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details