ಕರ್ನಾಟಕ

karnataka

By

Published : Oct 24, 2019, 10:05 PM IST

Updated : Oct 24, 2019, 11:33 PM IST

ETV Bharat / state

ವಾರದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಲೈನ್​​ಮ್ಯಾನ್​ ವಿದ್ಯುತ್​ ತಗುಲಿ ಸಾವು

ವಿದ್ಯುತ್‌ ತಂತಿ ತಗುಲಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು

ಚಿಕ್ಕಬಳ್ಳಾಪುರ:ವಿದ್ಯುತ್‌ ತಂತಿ ತಗುಲಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಗ್ರಾಮದಲ್ಲಿ ನಡೆದಿದೆ.

ಸೂಳೆಬಾವಿ ಗ್ರಾಮದ ನಾಗರಾಜ್ (26) ಮೃತಪಟ್ಟವ. ವಿದ್ಯುತ್ ಕಂಬದ ಮೇಲೆ ಜಂಪ್ ಸರಿಪಡಿಸುವ ವೇಳೆ ಈ ಅವಘಡ ಸಂಭವಿಸಿದೆ. ನಾಗರಾಜ್ ಒಂದು ವಾರದ ಹಿಂದೆಯಷ್ಟೇ ಮದುವೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು

ಇನ್ನು ಈ ವರ್ಷದಲ್ಲಿ ವಿದ್ಯುತ್ ಶಾಕ್ ಹೊಡೆದು ಮೂರು ಜನ ಅಸುನೀಗಿದ್ದು, ಬೆಸ್ಕಾಂ ಇಲಾಖೆ, ಲೈನ್ ಮ್ಯಾನ್​ಗಳ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Oct 24, 2019, 11:33 PM IST

ABOUT THE AUTHOR

...view details