ಚಿಕ್ಕಬಳ್ಳಾಪುರ:ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆಯ ದೂರಿನ ಹಿನ್ನೆಲೆ ಫುಡ್ ಇನ್ಸ್ಪೆಕ್ಟರ್ವೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ತಾಲೂಕು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ಇಲಾಖೆಯ ಫುಡ್ಇನ್ಸ್ಪೆಕ್ಟರ್ ಪ್ರಕಾಶ್ ಅಮಾನತು ಆದ ಅಧಿಕಾರಿ ಎಂದು ತಿಳಿದು ಬಂದಿದೆ. ಕಳೆದ 17-11-2020 ರ ಸಂಜೆ 7-30 ರಲ್ಲಿ ಚಿಂತಾಮಣಿ ನಗರದ ರಸ್ತೆಯಲ್ಲಿ ಕೆ.ಎ.06 ಎಎ 5946 ಕ್ಯಾಂಟರ್ ವಾಹನದಲ್ಲಿ ಪಡಿತರ ಅಕ್ಕಿ ಮೂಟೆಗಳ ಅಕ್ರಮ ಸಾಗಾಣಿಕೆ ಕುರಿತು ಚಿಂತಾಮಣಿ ತಹಶೀಲ್ದಾರ್ ಅವರಿಗೆ ಸಾರ್ಜನಿಕರು ದೂರು ನೀಡಿದ ಹಿನ್ನೆಲೆ ದಾಳಿ ನಡೆಸಿ ಕ್ಯಾಂಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಪಡಿತರ ಅಕ್ಕಿ ಮೂಟೆಗಳನ್ನು ವಶ ಪಡಿಸಿಕೊಂಡಿದ್ದರು.