ಚಿಕ್ಕಬಳ್ಳಾಪುರ :ಕುಡಿಯಲು ಹಣ ಕೊಡದ್ದಕ್ಕೆ ಪತಿ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಭದ್ರಂಪಲ್ಲಿಯಲ್ಲಿ ನಡೆದಿದೆ.
ಭದ್ರಂಪಲ್ಲಿಯ ರತ್ನಮ್ಮ (35) ಎಂಬುವರು ಮೃತ ಮಹಿಳೆ. ಈಕೆಯ ಪತಿ ಆದಿನಾರಾಯಣ ಎಂಬಾತ ಕುಡಿಯಲು ಹಣ ನೀಡದ್ದಕ್ಕೆ ಪತ್ನಿಯನ್ನ ಹೊಡೆದು ಕೊಂದಿದ್ದಾನೆ.