ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ : ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನನ್ನ ಕೊಚ್ಚಿ ಕೊಂದು, ಸುಟ್ಟು ಹಾಕಿದ ಪತಿ - ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನ ಕೊಂದ ಗಂಡ

ಶಂಕರ್‌ಗೆ ಸಾಕಷ್ಟು ಬಾರಿ ತಿಳಿ ಹೇಳಲಾಗಿದ್ದರೂ ತನ್ನ ಚಾಳಿ ಮುಂದುವರೆಸಿದ್ದ. ಇದರಿಂದ ಕೆರಳಿದ ಅಶೋಕ್ ಕಂಬಾಲಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಶಂಕರ್​ನನ್ನು ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದಾನೆ..

Husband kills young man for teasing his wife
ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನ ಕೊಲೆ

By

Published : Jan 23, 2022, 1:28 PM IST

ಚಿಕ್ಕಬಳ್ಳಾಪುರ :ಪತ್ನಿಯನ್ನು ಪದೇಪದೆ ಚುಡಾಯಿಸಿದ ಕಾರಣ ಯುವಕನ್ನೊಬ್ಬನನ್ನು ಪತಿರಾಯ ಬರ್ಬರವಾಗಿ ಕೊಲೆ ಮಾಡಿ ಸುಟ್ಟು ಹಾಕಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಂಬಾಲಹಳ್ಳಿಯಲ್ಲಿ ನಡೆದಿದೆ.

ಮುತ್ತಕದಹಳ್ಳಿ ಗ್ರಾಮದ ಶಂಕರ್ (28) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಹಲವು ತಿಂಗಳಿಂದ ಅಶೋಕ್ ಎಂಬಾತನ ಪತ್ನಿಯನ್ನು ಶಂಕರ್ ಪದೇಪದೆ ಚುಡಾಯಿಸುತ್ತಿದ್ದ.

ಶಂಕರ್‌ಗೆ ಸಾಕಷ್ಟು ಬಾರಿ ತಿಳಿ ಹೇಳಲಾಗಿದ್ದರೂ ತನ್ನ ಚಾಳಿ ಮುಂದುವರೆಸಿದ್ದ. ಇದರಿಂದ ಕೆರಳಿದ ಅಶೋಕ್ ಕಂಬಾಲಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಶಂಕರ್​ನನ್ನು ಕೊಲೆ ಮಾಡಿ ನಂತರ ಸುಟ್ಟು ಹಾಕಿದ್ದಾನೆ.

ಯುವಕನ ಕೊಚ್ಚಿ ಕೊಂದು, ಸುಟ್ಟು ಹಾಕಿದ ಪತಿರಾಯ

ಇದನ್ನೂ ಓದಿ: ನಿರ್ಮಾಪಕ ಉಮಾಪತಿ ಕೊಲೆಯತ್ನ ಪ್ರಕರಣ : ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ!

ಘಟನೆಗೆ ಸಂಬಂಧಸಿದಂತೆ ಮಂಚೇನಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೊದಲ ಮಗು ಪಡೆದ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್ ದಂಪತಿ!

ABOUT THE AUTHOR

...view details