ಗೌರಿಬಿದನೂರು(ಚಿಕ್ಕಬಳ್ಳಾಪುರ): ದ್ವಿಚಕ್ರ ವಾಹನದ ಸವಾರ ಬರುವ ವೇಳೆ ಸ್ಕಾರ್ಪಿಯೋ ವಾಹನದ ಚಾಲಕ ಬಾಗಿಲು ತೆರೆದಿದ್ದರಿಂದ ಭಾರಿ ಅನಾಹುತ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರ ಆಯತಪ್ಪಿ ಮತ್ತೊಂದು ಗೂಡ್ಸ್ ವಾಹನದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ಬಿ ಹೆಚ್ ರಸ್ತೆಯ ಕೃಷ್ಣ ಗ್ರ್ಯಾಂಡ್ ಎದುರು ನಡೆದಿದೆ.
ಗೌರಿಬಿದನೂರಿನಲ್ಲಿ ಭೀಕರ ಅಪಘಾತ: ವೈರಲ್ ಆಗುತ್ತಿದೆ ವಿಡಿಯೋ! - ಗೌರಿಬಿದನೂರಿನಲ್ಲಿ ಭೀಕರ ಅಪಘಾತ
ಗೌರಿಬಿದನೂರಿನಲ್ಲಿ ನಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
![ಗೌರಿಬಿದನೂರಿನಲ್ಲಿ ಭೀಕರ ಅಪಘಾತ: ವೈರಲ್ ಆಗುತ್ತಿದೆ ವಿಡಿಯೋ! Heavy crash in Gauribidanur](https://etvbharatimages.akamaized.net/etvbharat/prod-images/768-512-9111089-thumbnail-3x2-giri.jpg)
ಗೌರಿಬಿದನೂರಿನಲ್ಲಿ ಭಾರೀ ಅಪಘಾತ : ವೈರಲ್ ಆಗುತ್ತಿದೆ ವಿಡಿಯೋ!
ಗೌರಿಬಿದನೂರಿನಲ್ಲಿ ಭಾರೀ ಅಪಘಾತ: ವೈರಲ್ ಆಗುತ್ತಿದೆ ವಿಡಿಯೋ!
ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಪಘಾತದಲ್ಲಿ ಗೌರಿಬಿದನೂರು ನಿವಾಸಿ ನಿವೃತ್ತ ಶಿಕ್ಷಕ ನಾಗರಾಜ್ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.