ಚಿಕ್ಕಬಳ್ಳಾಪುರ: ದೇಶದಲ್ಲಿಉತ್ತಮ ಮಳೆ-ಬೆಳೆ, ಹಾಗೂ ನೆಮ್ಮದಿಗಾಗಿ ಗಂಧಧೋತ್ಸವವನ್ನು ದರ್ಗಾದಲ್ಲಿ ಅದ್ದೂರಿಯಾಗಿ ಆಚರಣೆ ನಡೆಸಿರುವ ಘಟನೆ ಚಿಂತಾಮಣಿ ತಾಲೂಕಿನ ಕೋತ್ತೂರಿನಲ್ಲಿ ನಡೆದಿದೆ.
ಉತ್ತಮ ಮಳೆ, ಬೆಳೆಗಾಗಿ ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಂ ಭಾಂದವರು ಮಾಡಿದ್ದಿಷ್ಟು..! - ಎನ್. ಕೊತ್ತೂರು ಗ್ರಾಮದಲ್ಲಿರುವ ಹಜರತ್- ಸೈಯದ್- ಯಾಕಿನ್- ಶಾವಲಿ ಬಾಬಾ ದರ್ಗಾ
ದೇಶದಲ್ಲಿ ಉತ್ತಮ ಮಳೆ-ಬೆಳೆ, ಹಾಗೂ ನೆಮ್ಮದಿಗಾಗಿ ಗಂಧಧೋತ್ಸವವನ್ನು ದರ್ಗಾದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದ ಘಟನೆ ಚಿಂತಾಮಣಿ ತಾಲೂಕಿನ ಕೋತ್ತೂರಿನಲ್ಲಿ ನಡೆದಿದೆ.

ಉತ್ತಮ ಮಳೆ,ಬೆಳೆಗಾಗಿ ಅದ್ದೂರಿ ಗಂದಧೋತ್ಸವ, ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಂ ಭಾಂದವರ ಪ್ರಾರ್ಥನೆ
ಉತ್ತಮ ಮಳೆ,ಬೆಳೆಗಾಗಿ ಅದ್ದೂರಿ ಗಂದಧೋತ್ಸವ, ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಂ ಭಾಂದವರ ಪ್ರಾರ್ಥನೆ
ಎನ್. ಕೊತ್ತೂರು ಗ್ರಾಮದಲ್ಲಿರುವ ಹಜರತ್- ಸೈಯದ್- ಯಾಕಿನ್- ಶಾವಲಿ ಬಾಬಾ ದರ್ಗಾದ 6ನೇ ವರ್ಷದ ಗಂಧೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಹಲವಾರು ವರ್ಷಗಳ ಇತಿಹಾಸ ಹೊಂದಿರುವ ದರ್ಗಾ ಗಂಧಧೋತ್ಸವದಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಗಂಧೋತ್ಸವ ಊರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಹೊರಟು ದರ್ಗಾ ತಲುಪಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಗಂಧವನ್ನು ದರ್ಗಾದಲ್ಲಿ ಸಮರ್ಪಿಸಲಾಯಿತು. ದೇಶದಲ್ಲಿ ಉತ್ತಮ ಮಳೆ-ಬೆಳೆಯಾಗಲಿ, ಸಾರ್ವಜನಿಕರು ಶಾಂತಿ, ನೆಮ್ಮದಿ ಆರೋಗ್ಯವಾಗಿ ಬಾಳಲಿ ಎಂಬುವುದು ಈ ಗಂಧೋತ್ಸವದ ಉದ್ದೇಶವಾಗಿದೆ.