ಚಿಕ್ಕಬಳ್ಳಾಪುರ: ಕಾಲೇಜು ಮುಗಿಸಿ ಮನೆಗಳಿಗೆ ಹೊರಟಿದ್ದ ಕಾಲೇಜು ವಿದ್ಯಾರ್ಥಿನಿಯರಿಗೆ ಪುಂಡನೊಬ್ಬ ಕಿರುಕುಳು ನೀಡಲು ಮುಂದಾಗಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಮಾರುತಿ ಸರ್ಕಲ್ ನಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದ ನಿವಾಸಿ ಶಿವು ಎಂಬುವವ ಜ್ಯೂಸ್ ಬಾಟಲಿಯೊಂದನ್ನು ಹಿಡಿದುಕೊಂಡು ಕಾಲೇಜು ಯುವತಿಯರ ಮೇಲೆ ಎರಚಲು ಪ್ರಯತ್ನಿಸುತಿದ್ದ ಎನ್ನಲಾಗಿದೆ. ಇನ್ನು ಈ ಜ್ಯೂಸ್ನಲ್ಲಿ ಯಾವುದೋ ಮೂರ್ಚೆ ಬರುವ ಔಷಧ ಇತ್ತು ಎಂದು ಹೇಳಲಾಗುತ್ತಿದೆ. ಕಾರಣ ಈತ ಯುವತಿಯರ ಮೇಲೆ ಸ್ಪ್ರೇ ಮಾಡಿದಾಗ ಅವರ ಕಣ್ಣುಗಳಲ್ಲಿ ಉರಿಯಾಗಿದೆಯಂತೆ.