ಚಿಕ್ಕಬಳ್ಳಾಪುರ: ಹೆಣ್ಣುಮಗು ಎಂಬ ಕಾರಣಕ್ಕೆ ಹಸುಗೂಸಿನ ಕತ್ತಿಗೆ ಟೈನ್ಹುರಿಯಿಂದ ನೇಣು ಬಿಗಿದು ಶೌಚಾಲಯದ ಕಿಟಕಿಯಲ್ಲಿ ಎಸೆದಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಹೆಣ್ಣೆಂದು ಹಸುಗೂಸಿನ ಕತ್ತಿಗೆ ನೇಣು ಬಿಗಿದು ಕಿಟಕಿಯಲ್ಲಿ ಎಸೆದ ಕ್ರೂರಿ.. ಇಂಥವರೂ ಇರ್ತಾರೆ.. - ಹುಟ್ಟಿದ ತಕ್ಷಣ ಹೆಣ್ಣುಮಗುವೊಂದನ್ನು ನೇಣು ಬಿಗಿದು ಕೊಲೆ
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
![ಹೆಣ್ಣೆಂದು ಹಸುಗೂಸಿನ ಕತ್ತಿಗೆ ನೇಣು ಬಿಗಿದು ಕಿಟಕಿಯಲ್ಲಿ ಎಸೆದ ಕ್ರೂರಿ.. ಇಂಥವರೂ ಇರ್ತಾರೆ.. Public hospital in Chintamani](https://etvbharatimages.akamaized.net/etvbharat/prod-images/768-512-12343254-thumbnail-3x2-lekh.jpg)
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ
ಇಂದು ಬೆಳ್ಳಗೆ ಶೌಚಾಲಯ ಸ್ವಚ್ಛಗೊಳಿಸಲು ಬಂದ ಸಿಬ್ಬಂದಿ ನವಜಾತ ಶಿಶು ಕಿಟಕಿಯಲ್ಲಿರುವುದನ್ನು ಕಂಡು ಕೂಡಲೇ ವೈದ್ಯರ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಆ ವೇಳೆಯೊಳಗೆ ಮಗು ಮೃತಪಟ್ಟಿತ್ತು ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Jul 3, 2021, 3:37 PM IST