ಕರ್ನಾಟಕ

karnataka

ETV Bharat / state

ಬೆಟ್ಟಕ್ಕೆ ಬೆಂಕಿ: ಸುಮಾರು 10 ಎಕರೆ ಮರಗಿಡಗಳು ಸುಟ್ಟು ಭಸ್ಮ - Chikkaballapur news

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜೀ ದುರ್ಗಾದ ಸುಮಾರು 10 ಎಕರೆ ಬೆಟ್ಟದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಬೆಟ್ಟ ಹೊತ್ತಿ ಉರಿದಿದೆ.

Fire up the hill:About 10 acres of woodland burned ashes
ಬೆಟ್ಟಕ್ಕೆ ಬೆಂಕಿ: ಸುಮಾರು 10 ಎಕರೆ ಮರಗಿಡಗಳು ಸುಟ್ಟು ಭಸ್ಮ

By

Published : Apr 4, 2020, 11:34 PM IST

ಚಿಕ್ಕಬಳ್ಳಾಪುರ:ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಂಬಾಜೀ ದುರ್ಗಾದ ಸುಮಾರು 10 ಎಕರೆ ಬೆಟ್ಟದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಬೆಟ್ಟ ಹೊತ್ತಿ ಉರಿದಿದೆ.

ತಾಲೂಕಿನ‌ ಕೋನಪಲ್ಲಿಯಲ್ಲಿ ಬೆಂಕಿ‌ ಕಾಣಿಸಿಕೊಂಡಿದ್ದು, ನಂತರ ಉಪ್ಪರಪೇಟೆ ಗ್ರಾಮದವರೆಗೂ ಬೆಂಕಿಯ ಕಿನ್ನಾಲಿಗೆ ಆವರಿಸಿಕೊಂಡಿದೆ. ಸದ್ಯ ಬೆಟ್ಟಕ್ಕೆ ಬೆಂಕಿ ಬಿದ್ದ ಹಿನ್ನೆಲೆ ಸುತ್ತಲಿನ ಗ್ರಾಮಗಳು ದಟ್ಟ ಹೊಗೆಯಿಂದ ತುಂಬಿಕೊಂಡಿವೆ.

ಈ ಬಗ್ಗೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ABOUT THE AUTHOR

...view details