ಕರ್ನಾಟಕ

karnataka

ETV Bharat / state

SSLC ಪೂರ್ವ ಸಿದ್ಧತಾ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ - ಚಿಕ್ಕಬಳ್ಳಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ನಗರದ 1ನೇ ವಾರ್ಡನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಬೇಬಿ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿ ಆತ್ಮಹತ್ಯೆ
ವಿದ್ಯಾರ್ಥಿನಿ ಆತ್ಮಹತ್ಯೆ

By

Published : Feb 23, 2022, 10:57 PM IST

Updated : Feb 24, 2022, 1:12 PM IST

ಚಿಕ್ಕಬಳ್ಳಾಪುರ: ಎಸ್​​ಎಸ್ಎಲ್​​ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ‌ ಘಟನೆ ನಗರದ 1 ನೇ ವಾರ್ಡಿನಲ್ಲಿ ನಡೆದಿದೆ. ನಗರದ 1ನೇ ವಾರ್ಡ್​​​ನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಬೇಬಿ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ತಿಳಿದು ಬಂದಿದೆ. ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ಬೇಬಿ ಕಳೆದ ದಿನವು ಪರೀಕ್ಷೆಗೆ ಹಾಜರಾಗಿರಲಿಲ್ಲ.

ಇಂದು ಸಹಾ ಪರೀಕ್ಷೆಗೆ ಹಾಜರಾಗುವಂತೆ ಶಿಕ್ಷಕರ ಮನವಿ ಮಾಡಿದ್ದು, ಬೇಬಿ ಸಹಪಾಠಿಗಳನ್ನು ಈ ಸಂಬಂಧ ವಿದ್ಯಾರ್ಥಿನಿಯ ಮನೆಗೆ ಕಳುಹಿಸಿದ್ರು. ಆದರೆ, ಶಾಲೆ ಹಾಗೂ ಪರೀಕ್ಷೆಗೆ ಹೋಗಲು ಇಷ್ಟವಿಲ್ಲವೆಂದು ಹೇಳಿದ್ದ ಬೇಬಿ ತಾಯಿಯ ಜೊತೆ ಹಠ ಮಾಡಿದ್ದಳು. ನಂತರ ಮನೆಯಲ್ಲಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Feb 24, 2022, 1:12 PM IST

For All Latest Updates

TAGGED:

ABOUT THE AUTHOR

...view details