ಕರ್ನಾಟಕ

karnataka

ETV Bharat / state

ಪ್ರಧಾನ ಮಂತ್ರಿ ಕಿಸಾನ್​ ಯೋಜನೆಯ ಸದ್ಬಳಕೆಗಾಗಿ ಜೆಡಿಎಸ್​ ಮುಖಂಡರ ಮನವಿ! - undefined

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್​ ಯೋಜನೆಯ ಬಗ್ಗೆ ಅರಿವು ಮೂಡಿಸಿ, ರೈತರಿಂದ ಅರ್ಜಿ ಸ್ವೀಕರಿಸಲಾಯಿತು.

ರೈತರಿಗೆ ಕೇಂದ್ರದ ಪ್ರಧಾನ ಮಂತ್ರಿ ಕಿಸಾನ್​ ಯೋಜನೆ ಅರಿವು ಮೂಡಿಸುತ್ತಿರುವುದು

By

Published : Jul 5, 2019, 4:39 AM IST

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ 2018ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಮನೆಮನೆ ಪ್ರಚಾರ ಕೈಗೊಂಡಿದ್ದಾರೆ.

ರೈತರಿಗೆ ಕೇಂದ್ರದ ಪ್ರಧಾನ ಮಂತ್ರಿ ಕಿಸಾನ್​ ಯೋಜನೆ ಅರಿವು ಮೂಡಿಸುತ್ತಿರುವುದು

ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡ ಬೊಮ್ಮನಹಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕುರಿತು ಅರಿವು ಹಾಗೂ ಅರ್ಜಿ ಪಡೆಯುವ ಕಾರ್ಯಕ್ರಮಕ್ಕೆ ಜೆಡಿಎಸ್ ಮುಖಂಡ ವೆಂಕಟರೆಡ್ಡಿ ಚಾಲನೆ ನೀಡಿದರು.

ಕಳೆದ 3 ದಿನಗಳಿಂದ ಕಸಬಾ ಹೋಬಳಿಯ ಹಲವಾರು ಗ್ರಾಮಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಹೆಚ್ಚಿನ ರೈತರು ಇದರ ಲಾಭ ಪಡೆದುಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ್​ ತಿಳಿಸಿದರು.

ಪ್ರತಿಯೊಬ್ಬ ದೊಡ್ಡ, ಸಣ್ಣ ಹಿಡುವಳಿದಾರರು ಅರ್ಹರಾಗಿದ್ದು. ಯಾವುದೇ ರೈತರಿಗೆ ಭೂಮಿಯ ವಿಸ್ತೀರ್ಣ ನಿಗದಿಯಿಲ್ಲ .ಇದರಿಂದ ₹6 ಸಾವಿರ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ರೈತರಿಗೆ ಹೇಳಿದರು.


ಜೆಡಿಎಸ್​ ಮುಖಂಡ ಶಿವರೆಡ್ಡಿ, ಗ್ರಾಮ ಸಹಾಯಕ ಮೂರ್ತಿ, ಅವಿನಾಶ್ ಇದ್ದರು.

For All Latest Updates

TAGGED:

ABOUT THE AUTHOR

...view details