ಚಿಕ್ಕಬಳ್ಳಾಪುರ: ಬಡತನದಲ್ಲಿ ಬೆಳೆದ ಜಿಲ್ಲೆಯ ಗೌರಿಬಿದನೂರು ಮೂಲದ ಬುಡಕಟ್ಟು ಸಮಾಜದ ಪ್ರತಿಭೆ ಇದೀಗ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ವಿಜ್ಞಾನಿಯಾಗಿದ್ದಾರೆ. ನಗಿರೆಗೆರೆ ಹೋಬಳಿಯ ನಡುವಿನ ತಾಂಡ ಗ್ರಾಮದ ನಿವಾಸಿಗಳಾದ ನಾಗೇನಾಯಕ್ ಹಾಗೂ ಲಕ್ಷ್ಮೀಬಾಯಿ ದಂಪತಿಯ ನಾಲ್ವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಲ್ಲಿ ಕೊನೆಯ ಮಗನಾದ ಓಂ ಪ್ರಕಾಶ್ ನಾಯಕ್ ಯಶಸ್ಸು ಸಾಧಿಸಿದ್ದಾರೆ.
ಓಂ ಪ್ರಕಾಶ್ ನಾಯಕ್ ಅವರು 1 ರಿಂದ 5 ರವರೆಗಿನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಡುವಿನ ತಾಂಡ ಗ್ರಾಮದಲ್ಲಿಯೂ, 6 ರಿಂದ 10 ರವರೆಗೂ ಜಿ ಕೊತ್ತೂರಿನ ಶಾರದಾ ದೇವಿ ವಿದ್ಯಾಶಾಲೆಯಲ್ಲೂ, ಬೆಂಗಳೂರಿನ ರೇಣುಕಾಚಾರ್ಯ ಪಿಯು ಕಾಲೇಜಿನಲ್ಲಿ ಪಿಯು ವ್ಯಾಸಂಗವನ್ನೂ ಹಾಗು ಪದವಿ ವಿದ್ಯಾಭ್ಯಾಸವನ್ನು ಜಿಕೆವಿಕೆಯಲ್ಲಿ ಮುಗಿಸಿದ್ದಾರೆ. ಇದೀಗ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಡಿ ಕೃಷಿ ಸಂಶೋಧನೆಯಲ್ಲಿ ಸೇವೆ ಸಲ್ಲಿಸಲು ಪ್ರವೇಶ ಮಟ್ಟದ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.