ಕರ್ನಾಟಕ

karnataka

ETV Bharat / state

ಖಾಸಗೀ ಬಸ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ : ಮೂವರ ದುರ್ಮರಣ

ಖಾಸಗಿ ಬಸ್​ ಹಾಗೂ ಬೈಕ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂರು ಜನ ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ರಂಗನಹಳ್ಳಿ ಕ್ರಾಸ್ ಬಳಿ ನಡೆದಿದೆ.

By

Published : Mar 17, 2019, 8:45 PM IST

ಖಾಸಗಿ ಬಸ್​ ಹಾಗೂ ಬೈಕ್​ ನಡುವೆ ಮುಖಾಮುಖಿ ಡಿಕ್ಕಿ

ಚಿಕ್ಕಬಳ್ಳಾಪುರ:ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರಿನ ರಂಗನಹಳ್ಳಿ ಕ್ರಾಸ್ ಬಳಿ ನಡೆದಿದೆ.

ತಿಪ್ಪಗೊಂಡನಹಳ್ಳಿಯ ವಿನಯ್ ಬಿನ್ ತ್ಯಾಗರಾಜು (25),ವಿನೋದ್​ಬಿನ್ ಶ್ರೀನಿವಾಸ (23) ಹಾಗೂ ಹೊಸಕೆರೆ ಗ್ರಾಮದ ಸುನಿಲ್ ಬಿನ್ ತಮ್ಮಣ್ಣ(25) ಮೃತ ದುರ್ದೈವಿಗಳು.ಇನ್ನುಅಪಘಾತಕ್ಕೆ ಅವಸರವೇ ಮೂಲ ಕಾರಣ ಎಂದು ತಿಳಿದು ಬಂದಿದೆ. ಇನ್ನುಘಟನಾ ಸ್ಥಳಕ್ಕೆ ಡಿವೈಎಸ್​ಪಿ ಗೌತಮ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಗೌರಿಬಿದನೂರು ‌ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

...view details