ಕರ್ನಾಟಕ

karnataka

By

Published : Nov 28, 2019, 12:46 PM IST

ETV Bharat / state

ಕನ್ನಡ ಚಿತ್ರರಂಗ ಡಾ. ಸುಧಾಕರ್​ ಪರವಿದೆ: ನಟ ಭುವನ್

ಉಪಚುನಾವಣೆ ಹಿನ್ನೆಲೆ ನಟ ಭುವನ್ ಪೊನ್ನಣ್ಣ ಅವರು ಡಾ. ಕೆ. ಸುಧಾಕರ್ ಪರ ಪ್ರಚಾರ ಚಿಕ್ಕಬಳ್ಳಾಪುರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

Actor Bhuvan Campaigning for Dr.sudhakar
ಕನ್ನಡ ಚಿತ್ರರಂಗ ಡಾ. ಸುಧಾಕರ್​ ಪರವಿದೆ: ನಟ ಭುವನ್

ಚಿಕ್ಕಬಳ್ಳಾಪುರ: ಉಪಚುನಾವಣೆಯ ಹಿನ್ನಲೆ ಕನ್ನಡ ಚಲಚಿತ್ರ ರಂಗದ ಸ್ಟಾರ್ ನಟ-ನಟಿಯರು ಈಗಾಗಲೇ ಡಾ. ಕೆ. ಸುಧಾಕರ್ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸಿದ್ದಾರೆ. ಈಗ ನಟ ಭುವನ್ ಪೊನ್ನಣ್ಣ ಸಹ ನಗರದಲ್ಲಿ ಬಿರುಸಿನ ಪ್ರಚಾರವನ್ನು ಶುರು ಮಾಡಿದ್ದಾರೆ.

ಕನ್ನಡ ಚಿತ್ರರಂಗ ಡಾ. ಸುಧಾಕರ್​ ಪರವಿದೆ: ನಟ ಭುವನ್

ಇಂದು ಬೆಳಗ್ಗೆಯಿಂದಲೇ ಮನೆ ಮನೆ ಪ್ರಚಾರ ನಡೆಸಿದ ಅವರು, ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆ ಮತ ನೀಡುವಂತೆ ಮನವಿ ಮಾಡಿದ್ರು. ಅಲ್ಲದೆ, ಡಾ. ಸುಧಾಕರ್​ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ಪಡೆದು, ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಗೆಲ್ಲುವವರೆಗೂ ಮತಯಾಚನೆ ನಡೆಸುತ್ತೇನೆ. ಕನ್ನಡ ಚಿತ್ರರಂಗ ಸುಧಾಕರ್ ಪರ ಇದೆ ಎಂದರು.

ರಾಜಕೀಯ ಪ್ರವೇಶ ವಿಚಾರ:

ಸದ್ಯ ಈಗಲೇ ರಾಜಕೀಯ ಪ್ರವೇಶದ ಬಗ್ಗೆ ಆಲೋಚನೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಚಾರ ಮಾಡುವುದಾಗಿ ನಟ ಭುವನ್​ ತಿಳಿಸಿದ್ದಾರೆ.

ABOUT THE AUTHOR

...view details