ಚಾಮರಾಜನಗರ: ಸ್ನೇಹಿತನ ಆಲೆಮನೆಗೆ ತೆರಳುತ್ತಿದ್ದ ಯುವಕ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಂದಹಳ್ಳಿ ಗ್ರಾಮದ ಸಚಿನ್(24) ಮೃತ ಯುವಕ. ಸಚಿನ್ ಮತ್ತು ಪ್ರಸಾದ್ ಇಬ್ಬರು ಸ್ನೇಹಿತರಾಗಿದ್ದು, ಕಳೆದ ಹಲವು ದಿನಗಳಿಂದ ಪ್ರಸಾದ್ನ ಆಲೆಮನೆಯಲ್ಲೇ ಮಲಗಲು ಸಚಿನ್ ತೆರಳುತ್ತಿದ್ದ. ಜೋರು ಮಳೆಯಿಂದಾಗಿ ಹಾವೊಂದು ಆಲೆಮನೆಯೊಳಗೆ ಸೇರಿಕೊಂಡು, ಇಂದು ಬೆಳಗಿನ ಜಾವ ಮಲಗಿದ್ದ ಸಚಿನ್ ಕಾಲಿಗೆ ಕಚ್ಚಿದೆ. ಆದ್ರೆ ಹಾವು ಕಚ್ಚಿರುವುದು ಸಚಿನ್ಗೆ ಗೊತ್ತಾಗಿರಲಿಲ್ಲ.