ಕರ್ನಾಟಕ

karnataka

ಕಾಲು ಉರಿಯುತ್ತಿದೆ ಎನ್ನುತ್ತಿದ್ದ ಯುವಕ ಸಾವು: ಆಲೆಮನೆಯಲ್ಲಿ ಮಲಗಿದ್ದಾಗ ಕಚ್ಚಿತ್ತು ಹಾವು!

ಹಾವು ಕಡಿತಕ್ಕೊಳಗಾಗಿ ಕಂದಹಳ್ಳಿ ಗ್ರಾಮದ ಸಚಿನ್ ಎಂಬಾತ ಸಾವನ್ನಪ್ಪಿದ್ದಾನೆ.

By

Published : Oct 21, 2021, 2:40 PM IST

Published : Oct 21, 2021, 2:40 PM IST

young man died by snake bite
ಹಾವು ಕಚ್ಚಿ ಯುವಕ ಸಾವು

ಚಾಮರಾಜನಗರ: ಸ್ನೇಹಿತನ ಆಲೆಮನೆಗೆ ತೆರಳುತ್ತಿದ್ದ ಯುವಕ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಂದಹಳ್ಳಿ ಗ್ರಾಮದ ಸಚಿನ್(24) ಮೃತ ಯುವಕ. ಸಚಿನ್ ಮತ್ತು ಪ್ರಸಾದ್ ಇಬ್ಬರು ಸ್ನೇಹಿತರಾಗಿದ್ದು, ಕಳೆದ ಹಲವು ದಿನಗಳಿಂದ ಪ್ರಸಾದ್​ನ ಆಲೆಮನೆಯಲ್ಲೇ ಮಲಗಲು ಸಚಿನ್​​ ತೆರಳುತ್ತಿದ್ದ. ಜೋರು ಮಳೆಯಿಂದಾಗಿ ಹಾವೊಂದು ಆಲೆಮನೆಯೊಳಗೆ ಸೇರಿಕೊಂಡು, ಇಂದು ಬೆಳಗಿನ ಜಾವ ಮಲಗಿದ್ದ ಸಚಿನ್ ಕಾಲಿಗೆ ಕಚ್ಚಿದೆ. ಆದ್ರೆ ಹಾವು ಕಚ್ಚಿರುವುದು ಸಚಿನ್​​ಗೆ ಗೊತ್ತಾಗಿರಲಿಲ್ಲ.

ಇದನ್ನೂ ಓದಿ:ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 17 ಕೋಣ ರಕ್ಷಣೆ; ಕಾರವಾರದಲ್ಲಿ 4 ಮಂದಿ ಬಂಧನ

ಕಾಲು ಉರಿಯುತ್ತಿದೆ ಎಂದು ಸಚಿನ್ ನನ್ನು ಜಿಲ್ಲಾಸ್ಪತ್ರೆಗೆ ಕರೆ ತಂದರಾದರೂ ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿದೆ‌‌. ಸದ್ಯ, ಯಳಂದೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ABOUT THE AUTHOR

...view details