ಕರ್ನಾಟಕ

karnataka

ETV Bharat / state

ಚಾಮರಾಜನಗರಕ್ಕೆ ಮತ್ತೆ ಡಿಸಿಯಾಗಿ ಬರಲಿದ್ದಾರಾ ಡಾ.ಎಂ.ಆರ್.ರವಿ?

ಡಾ.ಎಂ.ಆರ್.ರವಿ ವರ್ಗಾವಣೆಯಾದರೂ ಇನ್ನೂ ಅವರಿಗೆ ಕೆಲಸದ ಸ್ಥಳ ತೋರಿಸದಿರುವುದು, ಇದರ ಜೊತೆಗೆ ತಮ್ಮ ಅಧಿಕೃತ ವಸತಿ ತೊರೆಯದಿರುವುದು ಚಾಮರಾಜನಗರಕ್ಕೆ ಮತ್ತೆ ಡಿಸಿ ಆಗುತ್ತಾರೆ ಎಂಬ ಚರ್ಚೆಗೆ ಸಾಕಷ್ಟು ಪುಷ್ಟಿ ನೀಡುತ್ತಿದೆ.

By

Published : Dec 29, 2021, 12:45 PM IST

MR Ravi
ಡಾ ಎಂ ಆರ್ ರವಿ

ಚಾಮರಾಜನಗರ: ಎರಡು ಬಾರಿ ವರ್ಗಾವಣೆ ರದ್ದಾಗಿ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಎತ್ತಂಗಡಿಯಾದ ಡಾ.ಎಂ.ಆರ್.ರವಿ ಮತ್ತೆ ಚಾಮರಾಜನಗರಕ್ಕೆ ಜಿಲ್ಲಾಧಿಕಾರಿಯಾಗುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದ ಜೊತೆಗೆ ಅಧಿಕಾರಿ ವಲಯದಲ್ಲೂ ಜೋರಾಗಿ ಕೇಳಿಬಂದಿದೆ.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಡಾ.ಎಂ.ಆರ್.ರವಿ ವರ್ಗಾವಣೆಯಾದರೂ ಇನ್ನೂ ಅವರಿಗೆ ಸ್ಥಳ ತೋರಿಸದಿರುವುದು, ಜೊತೆಗೆ ತಮ್ಮ ಡಿಸಿ ವಸತಿ ತೊರೆಯದಿರುವುದು ಈ ಚರ್ಚೆಗೆ ಸಾಕಷ್ಟು ಪುಷ್ಟಿ ನೀಡುತ್ತಿದೆ.

ಕೊರೊನಾ ಎರಡನೇ ಅಲೆ ವೇಳೆ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ದುರಂತ ನಡೆದ ಬಳಿಕ ಡಾ‌.ಎಂ.ಆರ್.ರವಿ ಕಾರ್ಯವೈಖರಿ ವಿರುದ್ಧ ನಿರಂತರ ಪ್ರತಿಭಟನೆಯೂ ನಡೆದಿತ್ತು. ಬಳಿಕ, ವರ್ಗಾವಣೆ ಆದೇಶ ಹೊರಡಿಸಿದರಾದರೂ ಕೆಲವೇ ಗಂಟೆಗಳಲ್ಲಿ ರದ್ದಾಗಿ ಚಾಮರಾಜನಗರದಲ್ಲೇ ಡಿಸಿಯಾಗಿ ಮುಂದುವರೆದಿದ್ದರು. ಇದೀಗ ರವಿ ಅವರೇ ಮತ್ತೆ ಬರಲಿದ್ದು, ವರ್ಗಾವಣೆ ಆದೇಶಕ್ಕೆ ಸಿಎಂ ಅಂತಿಮ ಸಹಿಯೊಂದೇ ಬಾಕಿಯೆಂಬ ಮಾತು ಕೇಳಿಬಂದಿದ್ದು ಪರ-ವಿರೋಧ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ಇದನ್ನೂ ಓದಿ:ನಾ ಸಿಎಂ ಆಗಿದ್ದಾಗಲೇ ಮೇಕೆದಾಟು ಯೋಜನೆಗೆ ಡಿಪಿಆರ್‌.. ನಾವು ಪಾದಯಾತ್ರೆ ಆರಂಭಿಸಿದ್ರೇ ಕುಮಾರಸ್ವಾಮಿ ಅವರಿಗೇಕೆ ಹೊಟ್ಟೆಯುರಿ? ಸಿದ್ದರಾಮಯ್ಯ

ಒಂದು ಮಾಹಿತಿ ಪ್ರಕಾರ, ಚಾಮರಾಜನಗರಕ್ಕೆ ಮತ್ತೆ ನಿಯೋಜನೆಯಾಗುವ ವಿಶ್ವಾಸದಿಂದಲೇ ಡಿಸಿ ಇನ್ನೂ ಬೀಳ್ಕೊಡುಗೆ ಪಡೆದಿಲ್ಲ ಅಷ್ಟೇ ಅಲ್ಲ, ಜಿಲ್ಲಾಧಿಕಾರಿ ಅಧಿಕೃತ ನಿವಾಸವನ್ನು ಕೂಡಾ ತೆರವು ಮಾಡಿಲ್ಲ ಎನ್ನಲಾಗುತ್ತಿದೆ.

ABOUT THE AUTHOR

...view details