ಚಾಮರಾಜನಗರ: ಕಬಿನಿ ಮತ್ತು ಕೆಆರ್ಎಸ್ ಆಣೆಕಟ್ಟೆಯಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕುತ್ತಿದೆ.
ಭರಚುಕ್ಕಿ ಭೋರ್ಗರೆತ : ಕಣ್ತುಂಬಿಕೊಳ್ಳಲು ಗುರುವಾರದಿಂದ ಅವಕಾಶ - ಭರಚುಕ್ಕಿ ಜಲಪಾತ
ಹಾಲಿನ ನೊರೆಯಂತೆ ದುಮ್ಮಿಕ್ಕುತ್ತಿರುವ ಭರಚುಕ್ಕಿ ವೈಭವ ರುದ್ರರಮಣೀಯವಾಗಿದ್ದು ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಗುರುವಾರದಿಂದ ಅವಕಾಶ ಕಲ್ಪಿಸಲಾಗಿದೆ.
![ಭರಚುಕ್ಕಿ ಭೋರ್ಗರೆತ : ಕಣ್ತುಂಬಿಕೊಳ್ಳಲು ಗುರುವಾರದಿಂದ ಅವಕಾಶ Visitors are allowed to view Bharachukki falls from today](https://etvbharatimages.akamaized.net/etvbharat/prod-images/768-512-8351615-989-8351615-1596953892423.jpg)
ಭರಚುಕ್ಕಿ ಭೋರ್ಗರೆತ
ಮೈದುಂಬಿ ಹರಿಯುತ್ತಿದೆ ಭರಚುಕ್ಕಿ ಜಲಪಾತ
ಹಾಲಿನ ನೊರೆಯಂತೆ ದುಮ್ಮಿಕ್ಕುತ್ತಿರುವ ಭರಚುಕ್ಕಿ ವೈಭವ ರುದ್ರರಮಣೀಯವಾಗಿದ್ದು ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಗುರುವಾರದಿಂದ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಭರಚುಕ್ಕಿ ಜಲಪಾತ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಬಳಿಕ, ಸಚಿವ ಸುರೇಶಕುಮಾರ್ ಹಾಗೂ ಜಿಲ್ಲಾಧಿಕಾರಿ ಚರ್ಚಿಸಿ ಗುರುವಾರದಿಂದ ಪ್ರವಾಸಿಗರ ಭೇಟಿಗೆ ಅನುವು ಮಾಡಿಕೊಟ್ಟಿದ್ದಾರೆ.
ಒಂದೆಡೆ ಭರಚುಕ್ಕಿ ಎಲ್ಲರನ್ನೂ ಸೆಳೆಯುತ್ತಿದ್ದರೆ, ಕಾವೇರಿ ನದಿ ಪಾತ್ರದ 7 ಗ್ರಾಮಗಳಲ್ಲಿ ಪ್ರವಾಹ ಭೀತಿ ದಟ್ಟವಾಗುತ್ತಿದೆ.
Last Updated : Aug 9, 2020, 2:49 PM IST