ಕರ್ನಾಟಕ

karnataka

ETV Bharat / state

ಯುಪಿಎಸ್​ಸಿ ಪ್ರಶ್ನೆ ಪತ್ರಿಕೆ ಕನ್ನಡದಲ್ಲೂ ಬರೆಯುವಂತಾಗಲಿ : ಶಾಸಕ‌ ಎನ್. ಮಹೇಶ್ ಒತ್ತಾಯ

ಕೇಂದ್ರದ ಯುಪಿಎಸ್​ಸಿ, ರೈಲ್ವೆ, ಬ್ಯಾಂಕಿಂಗ್‌ ಇನ್ನಿತರ ಪರೀಕ್ಷೆಗಳ ಪ್ರಶ್ನೆ ‌ಪ್ರತಿಕೆಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಇರುತ್ತವೆ. ಇದರಿಂದ ಕನ್ನಡ ಭಾಷೆಯ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ..

By

Published : Nov 1, 2020, 1:19 PM IST

mahesh
ಶಾಸಕ‌ ಎನ್.ಮಹೇಶ್

ಕೊಳ್ಳೇಗಾಲ:ಕ್ರೇಂದ್ರದ ಯುಪಿಎಸ್​ಸಿ ಪೂರಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಕನ್ನಡ‌ ಮಾಧ್ಯಮದಲ್ಲಿ ಓದುವ, ಬರೆಯುವ ಮಕ್ಕಳಿಗೆ ತೊಂದರೆಯಾಗಿದೆ. ಮುಂದಿನ ವರ್ಷದಿಂದ ಕನ್ನಡದಲ್ಲೇ ಪ್ರಶ್ನೆ ‌ಪತ್ರಿಕೆ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶಾಸಕ‌ ಎನ್ ಮಹೇಶ್ ಒತ್ತಾಯಿಸಿದ್ದಾರೆ.

ಕೊಳ್ಳೇಗಾಲದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ
ಪಟ್ಟಣದ ಪ್ರೌಢ ಶಾಲೆ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಯುಪಿಎಸ್​ಸಿ, ರೈಲ್ವೆ, ಬ್ಯಾಂಕಿಂಗ್‌ ಇನ್ನಿತರ ಪರೀಕ್ಷೆಗಳ ಪ್ರಶ್ನೆ ‌ಪ್ರತಿಕೆಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಇರುತ್ತವೆ. ಇದರಿಂದಕನ್ನಡ ಭಾಷೆಯ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಆಯಾ ಪ್ರಾದೇಶಿಕ ಭಾಷೆಗೆ ಅನುಗುಣವಾಗಿ ಪ್ರಶ್ನೆ ಪ್ರತಿಕೆಗಳನ್ನು ಮುದ್ರಿಸಬೇಕು. 2500 ಸಾವಿರ ಇತಿಹಾಸವಿರುವ ಕನ್ನಡಕ್ಕೆ ಕೇಂದ್ರದ ಪರೀಕ್ಷೆಗಳಲ್ಲಿ ಸ್ಥಾನ ನೀಡಬೇಕು ಎಂದಿದ್ದಾರೆ.

ಶಾಸಕ ನರೇಂದ್ರ ಮಾತನಾಡಿ, ಕನ್ನಡ ನಾಡು, ಜಲ, ನೆಲ‌, ಭಾಷೆಗಳಿಗೆ ಹೋರಾಡಿದವರ ಸ್ಮರಣೆಯನ್ನು ನಾವು ಸದಾ ಮಾಡಬೇಕು. ನಮಗೆ ಅನ್ನ ನೀಡುವ ಭಾಷೆ ಕನ್ನಡ ಮಾತ್ರ, ಆದ್ದರಿಂದ ನಮ್ಮ ಮಾತೃ ಭಾಷೆಯ ಮೇಲೆ ಹೆಚ್ಚಿನ ಅಭಿಮಾನ ಇಡಬೇಕು ಎಂದರು.

ಇದಕ್ಕೂ ಮುನ್ನ ಉಪವಿಭಾಗಧಿಕಾರಿ ಗಿರೀಶ್ ದಿಲೀಪ್ ಬದೋಲೆ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ದಂಡಾಧಿಕಾರಿ ಕುನಾಲ್ ನಾಡ ಧ್ವಜಾರೋಹಣ ಮಾಡಿದ್ದು, ನಂತರ ಕನ್ನಡ ಭಾಷೆಯ ಇತಿಹಾಸದ ಸಂದೇಶವನ್ನು ತಿಳಿಸಲಾಯಿತು.

ABOUT THE AUTHOR

...view details