ಕರ್ನಾಟಕ

karnataka

ETV Bharat / state

ಈಜು ಬಾರದೆ ಕೆರೆಗಿಳಿದ ಬಾವ-ಬಾಮೈದ ನೀರುಪಾಲು! - undefined

ಈಜಲು ಹೋಗಿದ್ದ ಇಬ್ಬರು ಉತ್ತೂರು ಕೆರೆಯಲ್ಲಿ ನೀರುಪಾಲು. ಶವಕ್ಕಾಗಿ ಶೋಧ ನಡೆಸುತ್ತಿರುವ ತೆರಕಣಾಂಬಿ ಪೊಲೀಸರು.

ಭಾವ-ಭಾಮೈದುನ ನೀರುಪಾಲು

By

Published : May 5, 2019, 6:17 PM IST

ಚಾಮರಾಜನಗರ: ಸ್ನೇಹಿತರೊಂದಿಗೆ ಕೆರೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಉತ್ತೂರು ಕೆರೆಯಲ್ಲಿ ನಡೆದಿದೆ.

ತೆರಕಣಾಂಬಿಯ ಪುಟ್ಟಸ್ವಾಮಿ ಎಂಬವರ ಅಳಿಯ ತಮಿಳ್(29) ಹಾಗೂ ಪುಟ್ಟಸ್ವಾಮಿಯ ಮಗ ನಂದೀಶ್(23) ಮೃತರು. ಮೃತ ತಮಿಳ್ ಹಾಗೂ ನಂದೀಶ್ ಭಾವ-ಭಾಮೈದುನರಾಗಿದ್ದು ಇಬ್ಬರಿಗೂ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಸ್ನೇಹಿತರೊಂದಿಗೆ ಸ್ನಾನ ಮಾಡಲು ನೀರಿಗಿಳಿದ ನಂದೀಶ್ ಹಾಗೂ ತಮಿಳ್ ಈಜು ಬಾರದೇ ಮೃತಪಟ್ಟಿದ್ದು ಅಗ್ನಿಶಾಮಕ ದಳ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details