ಕರ್ನಾಟಕ

karnataka

ETV Bharat / state

ಪರಿಸರವಾದಿಗಳು, ರಾಜಕಾರಣಿಗಳ ಹಗ್ಗಜಗ್ಗಾಟ.. ಚುನಾವಣಾ ಹೊತ್ತಲ್ಲಾಗುವುದೇ ಹುಲಿ ರಕ್ಷಿತಾರಣ್ಯ? - ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಮಲೆಮಹದೇಶ್ವರ ವನ್ಯಜೀವಿಧಾಮವು ಬಿಆರ್​​ಟಿ, ಸತ್ಯಮಂಗಲಂ ಹಾಗೂ ಬರಗೂರು ಮೀಸಲು ಅರಣ್ಯದೊಟ್ಟಿಗಿನ ಸಂಪರ್ಕ ಸೇತುವಾಗಿದ್ದು, ಅರಣ್ಯ ಸಂರಕ್ಷಣೆ ಹಾಗೂ ಹುಲಿ ಸಂತತಿ ಉಳಿಸಲು ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ರಕ್ಷಿತಾರಣ್ಯವಾಗಿ ಘೋಷಿಸಬೇಕೆಂದು ಪರಿಸರವಾದಿಗಳು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಿದ್ದಾರೆ.

ಪರಿಸರವಾದಿಗಳು ಮತ್ತು ರಾಜಕಾರಣಿಗಳ ಹಗ್ಗಜಗ್ಗಾಟ.. ಚುನಾವಣಾ ಹೊತ್ತಲ್ಲಾಗುವುದೇ ಹುಲಿ ರಕ್ಷಿತಾರಣ್ಯ?
tug of war between environmentalists and politicians Is the tiger reserve going to happen during the election?

By

Published : Nov 14, 2022, 5:38 PM IST

ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ರಕ್ಷಿತಾರಣ್ಯ ಬೇಡವೇ ಬೇಡ ಎಂದು ರಾಜಕಾರಣಿಗಳು ಅಪಸ್ವರ ಎತ್ತುತ್ತಿದ್ದಾರೆ.

ಹೌದು.. ಚಾಮರಾಜನಗರ ಜಿಲ್ಲೆಯಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯಜೀವಿಧಾಮಗಳಿದ್ದು, ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂಬ ಅರಣ್ಯ ಇಲಾಖೆಯ ಪ್ರಸ್ತಾಪಕ್ಕೆ ಎನ್​ಟಿಸಿಎ ಕೂಡ ಅನುಮೋದನೆ ನೀಡಿದ್ದು, ಮುಖ್ಯಮಂತ್ರಿ ಬಳಿ ಈಗ ಕಡತ ಬಂದು ಕುಳಿತಿದೆ. ವನ್ಯಜೀವಿಧಾಮದಲ್ಲಿ 15ಕ್ಕೂ ಹೆಚ್ಚು ಹುಲಿಗಳಿರಬಹುದು ಎಂದು ಅಂದಾಜಿಸಲಾಗಿದೆ.

ಪರಿಸರವಾದಿಗಳು ಮತ್ತು ರಾಜಕಾರಣಿಗಳ ಹಗ್ಗಜಗ್ಗಾಟ.. ಚುನಾವಣಾ ಹೊತ್ತಲ್ಲಾಗುವುದೇ ಹುಲಿ ರಕ್ಷಿತಾರಣ್ಯ?

ಮಲೆಮಹದೇಶ್ವರ ವನ್ಯಜೀವಿಧಾಮವು ಬಿಆರ್​​ಟಿ, ಸತ್ಯಮಂಗಲಂ ಹಾಗೂ ಬರಗೂರು ಮೀಸಲು ಅರಣ್ಯದೊಟ್ಟಿಗಿನ ಸಂಪರ್ಕ ಸೇತುವಾಗಿದ್ದು, ಅರಣ್ಯ ಸಂರಕ್ಷಣೆ ಹಾಗೂ ಹುಲಿ ಸಂತತಿ ಉಳಿಸಲು ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ರಕ್ಷಿತಾರಣ್ಯವಾಗಿ ಘೋಷಸಿಬೇಕೆಂದು ಪರಿಸರವಾದಿಗಳು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಿದ್ದಾರೆ.

ಈ ಸಂಬಂಧ ಈಗಾಗಲೇ ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪ, ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಸೇರಿದಂತೆ ಹಲವರು ಟೈಗರ್ ರಿಸರ್ವ್ ಮಾಡುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ‌. ತಮಿಳುನಾಡಿನ‌ ಸಿಎಂ ಎಂ.ಕೆ. ಸ್ಟಾಲಿನ್ ಕೆಲವು ದಿನಗಳ ಹಿಂದೆಯಷ್ಟೇ ಕಾವೇರಿ ಕೊಳ್ಳದ ಮೀಸಲು ಅರಣ್ಯವನ್ನು ಕಾವೇರಿ ವನ್ಯಧಾಮ ಎಂದು ಘೋಷಿಸಿದ್ದು, ಸ್ಟಾಲಿನ್ ಅವರ ಪರಿಸರಪ್ರೇಮವನ್ನು ಬೊಮ್ಮಾಯಿ ಕೂಡ ತೋರಬೇಕೆಂದು ಹೂವರ್ ಒತ್ತಾಯಿಸಿದ್ದಾರೆ.

ರಾಜಕಾರಣಿಗಳ ತಕರಾರು: ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಜನರ ಓಡಾಟಕ್ಕೆ, ದನಗಾಹಿಗಳಿಗೆ, ಮಲೆಮಹದೇಶ್ವರನ ಭಕ್ತರಿಗೆ, ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗಲಿದೆ ಎಂಬುದು ಜನಪ್ರತಿನಿಧಿಗಳ‌ ವಾದವಾಗಿದೆ.

ಹುಲಿ ರಕ್ಷಿತಾರಣ್ಯ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ, ಕೈ ಶಾಸಕ ನರೇಂದ್ರ ಕೂಡ ಧ್ವನಿಗೂಡಿಸಿದ್ದರು. ಹನೂರಿನ ಜೆಡಿಎಸ್ ಮುಖಂಡ ಮಂಜುನಾಥ್ ಎಚ್​ಡಿಕೆ ಬಳಿ ಹುಲಿ ರಕ್ಷಿತಾರಣ್ಯ ಮಾಡದಂತೆ ಒತ್ತಡ ಹೇರಬೇಕೆಂದು ಮನವಿ ಮಾಡಿ ಬಂದಿದ್ದಾರೆ.

ಇದು ರಕ್ಷಿತಾರಣ್ಯ ಆಗಲಿ ಎಂದು ಕಳೆದ ಎರಡ್ಮೂರು ವರ್ಷಗಳಿಂದ ಪರಿಸರವಾದಿಗಳು ಒತ್ತಾಯಿಸುತ್ತಾ ಬಂದಿದ್ದು, ಈಗಲಾದರೂ ಅವರ ಬೇಡಿಕೆ ಈಡೇರಲಿದೆಯಾ ಎಂಬುದು ಯಕ್ಷಪ್ರಶ್ನೆಯಾಗಿದೆ. ಇನ್ನು ಚುನಾವಣಾ ಹೊಸ್ತಿಲಲ್ಲಿ ಈ ವಿಚಾರ ಮತ್ತೆ ಮುಂದಕ್ಕೆ ಹೋಗಲಿದೆಯಾ ಎಂಬುದು ಸಹ ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ.

ಹುಲಿ ಸಂರಕ್ಷಿತ ಪ್ರದೇಶವಾದರೆ ಜನರಿಗೆ, ಭಕ್ತರ ಓಡಾಟಕ್ಕೆ ಯಾವುದೇ ಅಡಚಣೆ ಇರಲಾರದು ಎಂಬ ಭರವಸೆಯನ್ನು ಅರಣ್ಯ ಇಲಾಖೆ ನೀಡಬೇಕಿದ್ದು ಇದುವರೆಗೆ ಈ ಸಂಬಂಧ ಯಾವುದೇ ಜಾಗೃತಿ ಮೂಡಿಸದೇ ಜಾಣಮೌನ ವಹಿಸಿದೆ.

ಇದನ್ನೂ ಓದಿ: ಭದ್ರಾ ಅಭಯಾರಣ್ಯದಲ್ಲಿ ಸಫಾರಿ ಹೊರಟವರ ಕ್ಯಾಮೆರಾದಲ್ಲಿ ಚಿರತೆ ಸೆರೆ : ವಿಡಿಯೋ

ABOUT THE AUTHOR

...view details