ಕರ್ನಾಟಕ

karnataka

ETV Bharat / state

'ಹಸಿರು' ವಲಯ ಎಂಬ ಅಸಡ್ಡೆಯೋ ಏನೋ?:  ಮಾಸ್ಕ್​ ಇದ್ರೂ ಸಾಮಾಜಿಕ ಅಂತರಕ್ಕೆ ಬ್ರೇಕ್ - ಚಾಮರಾಜನಗರದಲ್ಲಿ ತ್ರಿಬಲ್ ರೈಡಿಂಗ್

ಹಸಿರು ವಲಯ ಎಂಬ ಅಸಡ್ಡೆಯಿಂದಲೋ ಏನೋ ಜಿಲ್ಲೆಯ ಜನ ಕೊರೊನಾ ಭೀತಿಯಿಲ್ಲದೇ ಓಡಾಡುತ್ತಿದ್ದು, ಸಾಮಾಜಿಕ ಅಂತರವನ್ನ ಗಾಳಿಗೆ ತೂರಿದ್ದಾರೆ. ಅಲ್ಲಲ್ಲಿ ಸಣ್ಣ ಗೂಡಂಗಡಿಗಳು ತೆರೆದಿರುವುದರಿಂದ ಗುಂಪುಗುಂಪಾಗಿ ಸೇರುತ್ತಿರುವ ಸಾರ್ವಜನಿಕರು ಹರಟೆ ಹೊಡೆಯುವುದು ಸಾಮಾನ್ಯವಾಗಿದೆ.

there-is-no-social-distance-at-chamarajanagara
ಮುಖದಲ್ಲಿರುತ್ತೆ ಮಾಸ್ಕ್​​​, ಆದ್ರೆ ಸಾಮಾಜಿಕ ಅಂತರಕ್ಕೆ ಬ್ರೇಕ್

By

Published : May 11, 2020, 6:54 PM IST

ಚಾಮರಾಜನಗರ: ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಲಾಗಿದ್ದು, ಮಾಸ್ಕ್ ಜಾಗೃತಿ ಏನೋ ಉತ್ತಮವಾಗಿದೆ. ಆದ್ರೆ ಸಾಮಾಜಿಕ‌ ಅಂತರ ಮಾತ್ರ ಮರೀಚಿಕೆಯಾಗಿದೆ.

ಹಸಿರು ವಲಯವೆಂಬ ಅಸಡ್ಡೆಯಿಂದಲೋ ಏನೋ ಜಿಲ್ಲೆಯ ಜನ ಕೊರೊನಾ ಭೀತಿಯಿಲ್ಲದೇ ಓಡಾಡುತ್ತಿದ್ದು, ಸಾಮಾಜಿಕ ಅಂತರವನ್ನ ಗಾಳಿಗೆ ತೂರಿದ್ದಾರೆ. ಅಲ್ಲಲ್ಲಿ ಸಣ್ಣ ಗೂಡಂಗಡಿಗಳು ತೆರೆದಿರುವುದರಿಂದ ಗುಂಪುಗುಂಪಾಗಿ ಸೇರುತ್ತಿರುವ ಸಾರ್ವಜನಿಕರು ಹರಟೆ ಹೊಡೆಯುವುದು ಸಾಮಾನ್ಯವಾಗಿದೆ.

'ಹಸಿರು' ವಲಯವೆಂಬ ಅಸಡ್ಡೆ

ಇನ್ನು, ಜಿಲ್ಲೆಯ ಒಳಗಡೆ ವಾಹನ ಸಂಚಾರಕ್ಕೆ ಅವಕಾಶ ಸಿಕ್ಕಿರುವುದರಿಂದ ವಾಹನಗಳ ಸಂಖ್ಯೆ ಹೆಚ್ಚಿದ್ದು, ಸಂಚಾರ ನಿಯಮ‌ ಮಾತ್ರ ಇಲ್ಲವಾಗಿದೆ.‌ ಹೆಲ್ಮೆಟ್ ಧರಿಸದೇ ವಾಹನ‌ ಚಾಲನೆ ಮಾಡುತ್ತಿರುವುದು ಸಾಮಾನ್ಯವಾಗಿದ್ದು, ಕೋವಿಡ್-19 ಮುಗಿಯುವವರೆಗೆ ಬೈಕ್​ನಲ್ಲಿ ಓರ್ವ ಮಾತ್ರ ಸಂಚರಿಸಬೇಕೆಂಬ ನಿರ್ಬಂಧವಿದ್ದರೂ ಇದಕ್ಕೆ ಕ್ಯಾರೆ ಎನ್ನದೆ ತ್ರಿಬಲ್ ರೈಡಿಂಗ್ ಮಾಡುತ್ತಿದ್ದಾರೆ.

ನಗರಸಭೆ ನಿತ್ಯ‌ ಜಾಗೃತಿ‌ ಮೂಡಿಸಿ ಮಾಸ್ಕ್ ಧರಿಸಿದವರಿಗೆ ದಂಡ ವಿಧಿಸುತ್ತಿರುವುದರಿಂದ‌ ಜನರು ಮಾಸ್ಕ್ ಧರಿಸಿ ಮನೆ ಹೊರಗಡೆ ಬರುತ್ತಿದ್ದಾರೆ.‌ ಬೀದಿಬದಿ ವ್ಯಾಪಾರಿಗಳು, ವಾಹನ ಸವಾರರು, ಮಕ್ಕಳಾದಿಯಾಗಿ ಮುಖಗವಸು ಧರಿಸುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸುವುದು ಒಕೆ ಎಂಬ ಮಟ್ಟದಲ್ಲಿದ್ದರೂ ಸಾಮಾಜಿಕ ಅಂತರ ಮಾತ್ರ ಇಲ್ಲದಾಗಿದೆ.

ABOUT THE AUTHOR

...view details