ಚಾಮರಾಜನಗರ : ವಿದ್ಯಾರ್ಥಿ ಸೋಗಿನಲ್ಲಿ ಬಂದು ಶಿಕ್ಷಕರೊಬ್ಬರಿಗೆ ಪೆಪ್ಪರ್ ಸ್ಪ್ರೇ ಮಾಡಿ ತುರಿಕೆ ಬರುತ್ತಿದ್ದಂತೆ ಗಮನ ಬೇರೆಡೆ ಸೆಳೆದು ಹಾಡಹಗಲೇ 2 ಲಕ್ಷ ರೂ. ಅನ್ನು ಲಪಟಾಯಿಸಿರುವ ಘಟನೆ ನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ.
ವಿದ್ಯಾರ್ಥಿ ಸೋಗಲ್ಲಿ ಬಂದು ಕ್ಷಣಾರ್ಧದಲ್ಲೇ 2 ಲಕ್ಷ ರೂ. ಲಪಟಾಯಿಸಿದ ಖದೀಮ : CCTV video - ಪೆಪ್ಪರ್ ಸ್ಪ್ರೇ ಮಾಡಿ ಚಾಮರಾಜನಗರದಲ್ಲಿ ಕಳ್ಳತನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಪೆಪ್ಪರ್ ಸ್ಪ್ರೇ ಮಾಡಿ ತುರಿಕೆ ಬರುತ್ತಿದ್ದಂತೆ ಗಮನ ಬೇರೆಡೆ ಸೆಳೆದು ಹಾಡಹಗಲೇ 2 ಲಕ್ಷ ರೂ. ಅನ್ನು ಲಪಟಾಯಿಸಿರುವ ಘಟನೆ ನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ..

ಕ್ಷಣಾರ್ಧದಲ್ಲೇ 2 ಲಕ್ಷ ರೂ. ಲಪಟಾಯಿಸಿದ ಖದೀಮ
ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿವಕುಮಾರ್ ಹಣ ಕಳೆದುಕೊಂಡವರು. ಕ್ಷಣಾರ್ಧದಲ್ಲಿ ಹಣ ಕಳೆದುಕೊಂಡ ಘಟನೆ ಮೊಬೈಲ್ ಶಾಪೊಂದರ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಚಾಮರಾಜನಗರ ಪೊಲೀಸರು ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.