ಕರ್ನಾಟಕ

karnataka

ETV Bharat / state

ಬಿಜೆಪಿ ಜನಸೇವಕ ಸಮಾವೇಶಕ್ಕಾಗಿ ಪೊಲೀಸರಿಂದ ರಸ್ತೆ ಬಂದ್.. ಸಾರ್ವಜನಿಕರಿಗೆ ಪರದಾಟ - BJP Janesavaka convention at chamarajanagara

ಮನೆ, ಅಂಗಡಿ-ಮುಂಗಟ್ಟುಗಳಿಗೆ ತೆರಳಲೂ ಕೂಡ ಜನರು ಪರದಾಡುತ್ತಿದ್ದಾರೆ. ಚರಂಡಿ, ಕಾಂಪೌಂಡ್​ಗಳನ್ನು ಹಾರಿ ತಮ್ಮ ತಮ್ಮ ಮನೆಗೆ ಜನರು ಹೋಗುತ್ತಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ..

The policemen who made a roadblock for the BJP Janesavaka convention
ಬಿಜೆಪಿ ಜನಸೇವಕ ಸಮಾವೇಶಕ್ಕಾಗಿ ರಸ್ತೆ ಬಂದ್ ಮಾಡಿದ ಪೊಲೀಸರು.

By

Published : Jan 11, 2021, 4:32 PM IST

ಚಾಮರಾಜನಗರ :ಬಿಜೆಪಿ ಜನಸೇವಕ ಸಮಾವೇಶಕ್ಕಾಗಿ ಪೊಲೀಸರು ರಸ್ತೆಯನ್ನೇ ಬಂದ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಅಂಬೇಡ್ಕರ್ ಭವನ ಸಮೀಪದ ಮೈದಾನದಲ್ಲಿ ಇಂದು ಬಿಜೆಪಿಯ ಜನಸೇವಕ ಸಮಾವೇಶ ನಡೆಯುತ್ತಿದ್ದು, ಸಚಿವರಾದ ಆರ್.ಅಶೋಕ್ ಮತ್ತು ಸುರೇಶ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸಲಿರುವುದರಿಂದ ಕೋರ್ಟ್​ನಿಂದ ಸತ್ತಿ ರಾಷ್ಟ್ರೀಯ ಹೆದ್ದಾರಿಗೆ ಸೇರುವ ರಸ್ತೆಯನ್ನೇ ಪೊಲೀಸರು ಬಂದ್ ಮಾಡಿದ್ದಾರೆ.

ಓದಿ:ಬೆಳಗಾವಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಟ್ರಾಕ್ಟರ್ ರ‍್ಯಾಲಿ

ಮನೆ, ಅಂಗಡಿ-ಮುಂಗಟ್ಟುಗಳಿಗೆ ತೆರಳಲೂ ಕೂಡ ಜನರು ಪರದಾಡುತ್ತಿದ್ದಾರೆ. ಚರಂಡಿ, ಕಾಂಪೌಂಡ್​ಗಳನ್ನು ಹಾರಿ ತಮ್ಮ ತಮ್ಮ ಮನೆಗೆ ಜನರು ಹೋಗುತ್ತಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ABOUT THE AUTHOR

...view details