ಕರ್ನಾಟಕ

karnataka

By

Published : May 5, 2020, 12:40 PM IST

ETV Bharat / state

ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸೋಂಕಿತ ಪೇದೆ...? ಹಸಿರು ವಲಯದಲ್ಲೀಗ ತಲ್ಲಣ!

ಪೇದೆಗೆ ಹೋಂ ಕ್ವಾರಂಟೈನ್​​ನಲ್ಲಿ ಇರುವಂತೆ ಸೂಚಿಸಿದ್ದರೂ , ಆತ ಹನೂರಿನ ನೆಂಟರ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಪರಿಣಾಮ ಇದೀಗ ಚಾಮರಾಜನಗರ ಜಿಲ್ಲೆಯ ಸಾರ್ವಜನಿಕರು ಭಯಗ್ರಸ್ತರಾಗಿದ್ದಾರೆ.

chamarajanagara district
ಚಾಮರಾಜನಗರಕ್ಕೆ ಬಂದಿದ್ದನಂತೆ ಸೋಂಕಿತ ಪೇದೆ

ಚಾಮರಾಜನಗರ:ಕೋವಿಡ್ 19 ಸೋಂಕಿಗೆ ತುತ್ತಾಗಿರುವ ಬೆಂಗಳೂರಿನ ಪೊಲೀಸ್ ಪೇದೆ ಹನೂರು ತಾಲೂಕಿನ ಬೆಳ್ತೂರು ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದ್ದು, ಇದೀಗ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಪೇದೆಗೆ ಹೋಂ ಕ್ವಾರಂಟೈನ್​​ನಲ್ಲಿ ಇರುವಂತೆ ಸೂಚಿಸಿದ್ದರೂ ಆತ ಹನೂರಿನ ನೆಂಟರ ಮನೆಗೆ ಬಂದಿದ್ದರು ಎನ್ನಲಾಗಿದೆ. ಪರಿಣಾಮ ಇದೀಗ ಜಿಲ್ಲೆಯ ಸಾರ್ವಜನಿಕರು ಭಯಗ್ರಸ್ತರಾಗಿದ್ದಾರೆ.

ಇಷ್ಟೇ ಅಲ್ಲದೇ ಚೆಕ್ ಪೋಸ್ಟ್ ಸಿಬ್ಬಂದಿ, ವೈನ್ ಸ್ಟೋರ್​ಗೂ ತೆರಳಿದ್ದರು ಎಂಬ ಮಾಹಿತಿ ಎಲ್ಲೆಡೆ ರವಾನೆಯಾಗಿದ್ದು,ಪರಿಣಾಮ ಈಗಾಗಲೇ 18 ಜನರನ್ನು ಆಸ್ಪತ್ರೆ ಕ್ವಾರಂಟೈನ್​ಗೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಕರೆದುಕೊಂಡು ಬಂದಿದ್ದಾರೆ. ಇವರಲ್ಲಿ 9 ತಿಂಗಳ ಮಗು ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

For All Latest Updates

ABOUT THE AUTHOR

...view details