ಕರ್ನಾಟಕ

karnataka

By

Published : May 6, 2020, 1:57 PM IST

ETV Bharat / state

ಪೇದೆ ವರದಿ ಗೊಂದಲ: ಮಧ್ಯಾಹ್ನ 3 ಕ್ಕೆ ಬರಲಿದೆಯಂತೆ ನಿಖರ ಮಾಹಿತಿ

ಸೋಂಕಿತ ಪೊಲೀಸ್ ಪೇದೆ ವರದಿಯಲ್ಲಿ ಗೊಂದಲವರುವ ಕಾರಣ ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು ಮತ್ತೊಮ್ಮೆ ಲ್ಯಾಬ್​​ ಟೆಸ್ಟ್​​ಗೆ ಕಳಿಸಲಾಗಿದೆ ಎಂದು ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದಾರೆ.

suresh kumar reaction on police constable report
ಪೇದೆ ವರದಿ ಗೊಂದಲ

ಚಾಮರಾಜನಗರ: ಸೋಂಕಿತ ಪೊಲೀಸ್ ಪೇದೆ ವರದಿಯಲ್ಲಿ ಗೊಂದಲ ಮೂಡಿರುವ ಹಿನ್ನೆಲೆ ಮತ್ತೊಮ್ಮೆ ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್​​ ಕುಮಾರ್​ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪೇದೆಯ ವರದಿ ಗೊಂದಲ ಮೂಡಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಅವರ ಗಂಟಲು ದ್ರವ ಪರೀಕ್ಷೆಗೆ ರವಾನಿಸಿದ್ದು ಮಧ್ಯಾಹ್ನ 3 ರ ವೇಳೆಗೆ ಅದರ ಫಲಿತಾಂಶದ ವರದಿ ಬರಲಿದ್ದು, ನಾನು ಅದನ್ನು ಎದುರು ನೋಡುತ್ತಿದ್ದೇನೆ ಎಂದರು.

ಇನ್ನು, ಸರ್ಕಾರ ಈಗಾಗಲೇ ನೇಕಾರರಿಗೆ, ಕ್ಷೌರಿಕ, ಮಡಿವಾಳ ಹಾಗೂ ಹೂ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಲಾಕ್​ಡೌನ್​​ನಿಂದ ತೊಂದರೆಗೀಡಾಗಿದ್ದ ಕುಟುಂಬಗಳಿಗೆ ಇದರಿಂದ ನೆರವು ಸಿಗಲಿದೆ ಎಂದರು.

ABOUT THE AUTHOR

...view details