ಕರ್ನಾಟಕ

karnataka

ETV Bharat / state

ಗರ್ಭಿಣಿ ಆನೆ ಹತ್ಯೆಗೆ ಕಂಬನಿ ಮಿಡಿದ ಸಚಿವ ಎಸ್‌.ಸುರೇಶ್‌ ಕುಮಾರ್ - Elephant Died in Kerala 2020

ಕೇರಳದಲ್ಲಿ‌ ಮಾನವ ನಿರ್ಮಿತ ಕೃತ್ಯದಿಂದ ಅಮಾಯಕ ಗರ್ಭಿಣಿ ಆನೆ ಸಾವನ್ನಪ್ಪಿರುವ ಪ್ರಕರಣ ನೆನೆಸಿಕೊಂಡು ಸಚಿವ ಸುರೇಶ ಕುಮಾರ್ ಕಂಬನಿ ಮಿಡಿದರು.

In Pregnant Elephant's Killing In Kerala
ಸಚಿವ ಸುರೇಶ ಕುಮಾರ್

By

Published : Jun 5, 2020, 3:26 PM IST

ಕೊಳ್ಳೇಗಾಲ:ಕಿಡಿಗೇಡಿಗಳು ಪಟಾಕಿ ತುಂಬಿದ ಅನಾನಸ್​​ ಹಣ್ಣನ್ನು ​ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಗರ್ಭಿಣಿ ಆನೆಗೆ ತಿನಿಸಿದ ಪರಿಣಾಮ ಆನೆ ಮೃತಪಟ್ಟಿರುವ ದಾರುಣ ಘಟನೆ ನೆನೆದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್ ಭಾವುಕರಾದರು.

ಸಚಿವ ಎಸ್‌.ಸುರೇಶ ಕುಮಾರ್

ಪ್ರಾಣಿಗಳನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಮುಂದೆ ಯಾರೂ ಈ ರೀತಿ ಮಾಡಬಾರದು. ಕೇರಳದಲ್ಲಿ ನಡೆದ ಕೃತ್ಯ ಮಾತ್ರ ಖಂಡನೀಯ. ಪರಿಸರ ಉಳಿಸಿ‌ ಸಂರಕ್ಷಿಸುವ ಗುಣ ಬೆಳೆಸಿಕೊಳ್ಳಬೇಕು. ಈ ಕುರಿತು ಸಹಿ ಸಂಗ್ರಹ ಚಳುವಳಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details