ಕರ್ನಾಟಕ

karnataka

ETV Bharat / state

ಪ್ರತ್ಯೇಕ ಪ್ರಕರಣ: ಒಂದೇ ದಿನ ಕಾಲು ಜಾರಿ ಬಾವಿಗೆ ಬಿದ್ದಿದ್ದ ಮೂವರ ರಕ್ಷಣೆ - ಚಾಮರಾಜನಗರ ಲೇಟೆಸ್ಟ್​ ಅಪ್ಡೇಟ್​ ನ್ಯೂಸ್​

ಒಂದೇ ದಿನ ಬಾವಿಗೆ ಬಿದ್ದಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

chamrajnagar
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ: ಬಾವಿಗೆ ಬಿದ್ದಿದ್ದ ಮೂವರ ರಕ್ಷಣೆ

By

Published : Dec 20, 2020, 1:01 PM IST

ಚಾಮರಾಜನಗರ: ಪ್ರತ್ಯೇಕ ಪ್ರಕರಣದಲ್ಲಿ ಒಂದೇ ದಿನ ಬಾವಿಗೆ ಬಿದ್ದಿದ್ದ ಮೂವರನ್ನು ರಕ್ಷಿಸಿರುವ ಘಟನೆ ಹನೂರು ಪಟ್ಟಣ ಹಾಗೂ ಕೊಳ್ಳೇಗಾಲದ ಕುಣಗಳ್ಳಿಯಲ್ಲಿ ಶನಿವಾರ ನಡೆದಿದೆ.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ: ಬಾವಿಗೆ ಬಿದ್ದಿದ್ದ ಮೂವರ ರಕ್ಷಣೆ

ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣ ಸಮೀಪದಲ್ಲಿರುವ ತೋಟವೊಂದರಲ್ಲಿರುವ ಬಾವಿಯಲ್ಲಿ ದೊರೆಸ್ವಾಮಿ (21), ಕುಮಾರ (60) ಎಂಬುವರು ಆಕಸ್ಮಿಕವಾಗಿ ಬಿದ್ದಿದ್ದರು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.

ಅಂದಾಜು 70 ಅಡಿ ಅಳ ಹಾಗೂ 30 ಅಡಿ ಕೊಳಚೆ ನೀರು ತುಂಬಿದ್ದ ಬಾವಿಗೆ ಇವರಿಬ್ಬರು ಆಕಸ್ಮಿಕವಾಗಿ ಬಿದ್ದಿದ್ದರು ಎನ್ನಲಾಗಿದೆ. ಸದ್ಯ, ಇಬ್ಬರಿಗೂ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.

ವೃದ್ಧೆಯ ರಕ್ಷಣೆ: ಕೊಳ್ಳೇಗಾಲ ನಗರ ಸಮೀಪದ ಕುಣಗಹಳ್ಳಿಯ ರಸ್ತೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಮುಡಿಗುಂಡ ನಿವಾಸಿ ಚಂದ್ರಮ್ಮ(60) ಎಂಬವರನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ವಾಕಿಂಗ್ ಮಾಡಲು ತೆರಳಿದ್ದ ವೇಳೆ ಬಾವಿಗೆ ಬಿದ್ದಿದ್ದರು ಎನ್ನಲಾಗ್ತಿದೆ.

ABOUT THE AUTHOR

...view details