ಕರ್ನಾಟಕ

karnataka

ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ: ರಾಜೀನಾಮೆಗೆ ಒತ್ತಾಯ

By

Published : Nov 21, 2019, 3:04 PM IST

ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿ ಕುರುಬ ಸಂಘದ ಸದಸ್ಯರು ಪ್ರತಿಭಟಿಸಿ, ಕನಕ ಗುರು ಪೀಠದ ಶ್ರೀಗಳ ಕುರಿತು ನಿಂದನಾತ್ಮಕವಾಗಿ ಮಾತನಾಡಿರುವುದು ಭಕ್ತ ಸಮುದಾಯಕ್ಕೆ ನೋವುಂಟು ಮಾಡಿದ್ದು, ಕೂಡಲೇ ಶ್ರೀಗಳು ಸಮುದಾಯದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ

ಚಾಮರಾಜನಗರ:ಕನಕ ಗುರು ಪೀಠದ ಈಶ್ವರಾನಂದ ಸ್ವಾಮೀಜಿ ವಿರುದ್ಧ ಸಚಿವ ಮಾಧುಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿ ಕುರುಬ ಸಂಘ ಪ್ರತಿಭಟನೆ ನಡೆಸಿತು.

ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ

ಚಾಮರಾಜೇಶ್ವರ ದೇಗುಲ ಮುಂಭಾಗದಿಂದ, ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.

ಶ್ರೀಗಳ ಕುರಿತು ನಿಂದನಾತ್ಮಕವಾಗಿ ಮಾತನಾಡಿರುವುದು ಭಕ್ತ ಸಮುದಾಯಕ್ಕೆ ನೋವುಂಟು ಮಾಡಿದೆ. ಹಾಗಾಗಿ ಕೂಡಲೇ ಶ್ರೀಗಳಲ್ಲಿ ಮತ್ತು ಸಮುದಾಯದ ಕ್ಷಮೆ ಕೋರಬೇಕು. ಬೇಜವಾಬ್ದಾರಿಯಿಂದ ವರ್ತಿಸಿರುವುದಕ್ಕೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇನ್ನು ಗುಂಡ್ಲುಪೇಟೆ ತಾಲೂಕು ಕಚೇರಿ ಮುಂಭಾಗವೂ ತಾಲೂಕು ಕುರುಬ ಸಂಘ ಪ್ರತಿಭಟನೆ ನಡೆಸಿದ್ದು ಸಚಿವರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಯ್ತು. ಸಚಿವರು ಕ್ಷಮೆ ಕೋರಿ ರಾಜೀನಾಮೆ ನೀಡುವವರೆಗೂ ಸಮುದಾಯದ ಹೋರಾಟ ನಿಲ್ಲಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

For All Latest Updates

ABOUT THE AUTHOR

...view details