ಕರ್ನಾಟಕ

karnataka

ETV Bharat / state

ಬೊಮ್ಮಲಾಪುರದ ಜ್ಯೋತಿಷಿಗೆ ಪ್ರತಿಷ್ಠಿತ 'ಜ್ಯೋತಿರ್ವಿದ್ಯಾಭಾಸ್ಕರ ಪ್ರಶಸ್ತಿ' ಘೋಷಣೆ - ಜ್ಯೋತಿಷಿ ಸುಮಂತ್

ಕೊರೊನಾ ಕಾಲದಲ್ಲಿ ಹತ್ತಾರು ಬಾಲಕರಿಗೆ ಆನ್​ಲೈನ್ ಮೂಲಕ ಉಚಿತ ವೇದ ಪಾಠವನ್ನು ನಡೆಸಿದ್ದ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿರುವ ಜ್ಯೋತಿಷಿ ಸುಮಂತ್​ ಅವರಿಗೆ ಪ್ರತಿಷ್ಠಿತ ಜ್ಯೋತಿರ್ವಿದ್ಯಾಭಾಸ್ಕರ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ.

astrologer Sumanth
ಜ್ಯೋತಿಷಿ ಸುಮಂತ್

By

Published : Apr 29, 2022, 5:49 PM IST

ಚಾಮರಾಜನಗರ: ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಮತ್ತು ಸುವರ್ಣ ಚಾರಿಟೆಬಲ್ ಟ್ರಸ್ಟ್ ಆಧ್ಯಾತ್ಮಿಕ ಕ್ಷೇತ್ರಕ್ಕೆ ಕೊಡಮಾಡುವ ಜ್ಯೋತಿರ್ವಿದ್ಯಾಭಾಸ್ಕರ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಅರ್ಚಕ, ಜ್ಯೋತಿಷಿ ಸುಮಂತ್ ಅವರಿಗೆ ಘೋಷಿಸಲಾಗಿದೆ.

ಇದೇ ಮೇ 5 ರಂದು ಬೆಂಗಳೂರಿನ‌ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿ ಪತ್ರ, ಫಲಕ ಹಾಗೂ ನಗದು ಪುರಸ್ಕಾರ ಕೊಟ್ಟು ಗೌರವಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜನೆಯಾಗಿದೆ. ಸುಮಂತ್ ಅವರು ಹರಿದ್ವಾರ ಮತ್ತು ಋಷಿಕೇಶದಲ್ಲಿ 3 ವರ್ಷ ಶೈವಾಗಮ ಶಿಕ್ಷಣ ಪಡೆದಿದ್ದಾರೆ. ಕೊರೊನಾ ಕಾಲದಲ್ಲಿ ಹತ್ತಾರು ಬಾಲಕರಿಗೆ ಆನ್​ಲೈನ್ ಮೂಲಕ ಉಚಿತ ವೇದ ಪಾಠವನ್ನು ನಡೆಸಿದ್ದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದಾರೆ.

ಇದನ್ನೂ ಓದಿ:58ನೇ ವಯಸ್ಸಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಶಾಸಕ

ABOUT THE AUTHOR

...view details