ಚಾಮರಾಜನಗರ:ಶಾಲೆ ಸಮೀಪ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದು, ಇದರಿಂದ ರೊಚ್ಚಿಗೆದ್ದ ಚುಂಗಡಿ ಗ್ರಾಮಸ್ಥರು ಅಬಕಾರಿ ಡಿಸಿ ವಿರುದ್ಧ ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಶಾಲೆ ಪಕ್ಕ ಮದ್ಯದಂಗಡಿ ತೆರೆಯಲು ಅನುಮತಿ: ಅಬಕಾರಿ ಡಿಸಿ ವಿರುದ್ಧ ಪ್ರತಿಭಟನೆ - ಅಧಿಕಾರಿಗಳಿಗೆ ಮದ್ಯದಂಗಡಿ ತೆರೆಯದಂತೆ ಮನದಟ್ಟು
ಶಾಲೆ ಸಮೀಪವೇ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದು, ಗ್ರಾಮಸ್ಥರು ಅಬಕಾರಿ ಡಿಸಿ ವಿರುದ್ಧ ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
![ಶಾಲೆ ಪಕ್ಕ ಮದ್ಯದಂಗಡಿ ತೆರೆಯಲು ಅನುಮತಿ: ಅಬಕಾರಿ ಡಿಸಿ ವಿರುದ್ಧ ಪ್ರತಿಭಟನೆ](https://etvbharatimages.akamaized.net/etvbharat/prod-images/768-512-4649307-thumbnail-3x2-surya.jpg)
ಅಬಕಾರಿ ಡಿಸಿ ವಿರುದ್ಧ ಪ್ರತಿಭಟನೆ
ಅಬಕಾರಿ ಡಿಸಿ ಮಾದೇಶ್ ಶಾಲೆ ಪಕ್ಕ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದಾರೆ. ಚುಂಗಡಿ ಗ್ರಾಮದ ಮುಖ್ಯರಸ್ತೆಯಲ್ಲೇ ಎಂಎಸ್ಐಎಲ್ ಮದ್ಯದಂಗಡಿ ತೆರೆಯಬಾರದು. ಪಕ್ಕದಲ್ಲೇ ಶಾಲೆಯಿದೆ,ಕಾಲೇಜು ವಿದ್ಯಾರ್ಥಿಗಳು ತಿರುಗಾಡುವುದರಿಂದ ಈ ಹಿಂದಿನ ಅಬಕಾರಿ ಅಧಿಕಾರಿಗಳಿಗೆ ಮದ್ಯದಂಗಡಿ ತೆರೆಯದಂತೆ ಮನದಟ್ಟು ಮಾಡಲಾಗಿತ್ತು. ಆದರೆ, ಏಕಾಏಕಿ ಹೊಸ ಡಿಸಿ ಅನುಮತಿ ನೀಡಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಡಿಸಿ ವಿರುದ್ಧ ಪ್ರತಿಭಟನೆ
ಮದ್ಯದಂಗಡಿ ತೆರೆಯುವುದರಿಂದ ಅಕ್ಕಪಕ್ಕದ ಗ್ರಾಮಗಳಲ್ಲೂ ಶಾಂತಿ-ಸುವ್ಯವಸ್ಥೆ ಕೆಡಲಿದೆ ಒಂದು ವೇಳೆ ತೆರೆದಿದ್ದೇ ಆದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.