ಕರ್ನಾಟಕ

karnataka

ETV Bharat / state

ಚಾಮರಾಜನಗರ: ‌ಕಪ್ಪು ಕೂದಲು, ಹೊಸ ಹಲ್ಲುಗಳು ಹುಟ್ಟಿ ಗಮನ ಸೆಳೆದಿದ್ದ ಶತಾಯುಷಿ ಮಹಿಳೆ ನಿಧನ - ಶಾಸಕ ಸಿ ಪುಟ್ಟರಂಗಶೆಟ್ಟಿ

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಶತಾಯುಷಿ ವೃದ್ದೆಯೊಬ್ಬರು ಮೃತಪಟ್ಟಿದ್ದಾರೆ.

ಶತಾಯುಷಿ ವೃದ್ದೆ
ಶತಾಯುಷಿ ವೃದ್ದೆ

By

Published : Sep 19, 2022, 9:10 PM IST

ಚಾಮರಾಜನಗರ: 60 ರ ಬಳಿಕ ಅರಳು ಮರಳಲ್ಲ ಮರಳಿ ಅರಳು ಎಂಬ ಮಾತಿನಂತೆ ಈ ವೃದ್ಧೆಗೆ ನೆರೆ ಕೂದಲಿನ ಜಾಗದಲ್ಲಿ ಕಪ್ಪು ಕೂದಲು, 4 ಹೊಸ ಹಲ್ಲುಗಳು ಹುಟ್ಟಿ ಗ್ರಾಮದಲ್ಲಿ ಎಲ್ಲರ ಗಮನ ಸೆಳೆದಿದ್ದ ಶತಾಯುಷಿ ಇಂದು ನಿಧನರಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಲೇ. ರಂಗನಾಯಕರ ಪತ್ನಿ ನಿಂಗಮ್ಮ (104) ಮೃತರು.‌ ಕಳೆದ ಒಂದು ವರ್ಷದ ಹಿಂದೆ ನಿಂಗಮ್ಮಗೆ ನೆರೆ ಕೂದಲಿದ್ದ ಜಾಗದಲ್ಲಿ ಕಪ್ಪು ತಲೆಗೂದಲು ಹುಟ್ಟಿದ್ದವು. ಇದರೊಟ್ಟಿಗೆ, ದವಡೆ ಹಲ್ಲುಗಳು ಮೂಡಿ ಎಲ್ಲರನ್ನೂ ಅಚ್ಚರಿಗೆ ನೂಕಿತ್ತು.

ವಯೋಸಹಜದಿಂದ ನಿಂಗಮ್ಮ ನಿಧನರಾಗಿದ್ದು, ಮೃತರು ಮೂವರು ಗಂಡು ಮಕ್ಕಳು‌ ಹಾಗೂ ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಸ್ವಗ್ರಾಮದ ಜಮೀನಿನಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿದ್ದು, ಶಾಸಕ ಸಿ ಪುಟ್ಟರಂಗಶೆಟ್ಟಿ ಸೇರಿ ಅನೇಕರು ಅಂತಿಮ ದರ್ಶನ ಪಡೆದಿದ್ದಾರೆ.

ಓದಿ:ಬಸ್​ನಿಂದ ಹೊರಗೆಸೆಯಲ್ಪಟ್ಟು ವಿದ್ಯಾರ್ಥಿ ಸಾವು : ಬಸ್​ ಡ್ರೈವರ್, ಕಂಡಕ್ಟರ್ ಬಂಧನ

ABOUT THE AUTHOR

...view details