ಚಾಮರಾಜನಗರ: ಮಳೆಯ ಆರ್ಭಟಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್ ನಿರಂಜನಕುಮಾರ್ ದೇಣಿಗೆ ಎತ್ತಲು ಮುಂದಾಗಿದ್ದಾರೆ.
ನೆರೆ ಸಂತ್ರಸ್ತರಿಗಾಗಿ ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಲು ಶಾಸಕ ನಿರಂಜನ್ ನಿರ್ಧಾರ - ಉತ್ತರ ಕರ್ನಾಟಕ ಪ್ರವಾಹ
ಮಳೆಯ ಆರ್ಭಟಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್ ನಿರಂಜನಕುಮಾರ್ ದೇಣಿಗೆ ಎತ್ತಲು ಮುಂದಾಗಿದ್ದಾರೆ.

ಶಾಸಕ ನಿರಂಜನ್ ಕುಮಾರ್
ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆ.12 ರ ಸೋಮವಾರ ಗುಂಡ್ಲುಪೇಟೆಯ ಪ್ರವಾಸಿಮಂದಿರದಿಂದ ಬೆಳಗ್ಗೆ 10.30 ಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದು, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ಥರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಎಂದು ಮನವಿ ಮಾಡಿದ್ದಾರೆ.
ಸಂಘ-ಸಂಸ್ಥೆಗಳ ಸಹಯೋಗದಲ್ಲಿ "ನಮ್ಮ ನಡಿಗೆ ಪ್ರವಾಹ ಪೀಡಿತರ ಕಡೆಗೆ" ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಪಟ್ಟಣ ನಿವಾಸಿಗಳು ಪಾಲ್ಗೊಂಡು ಸಹಾಯ ಮಾಡಬೇಕೆಂದು ಫೇಸ್ ಬುಕ್ ಮೂಲಕ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕೈಲಾದಷ್ಟು ವೈಯಕ್ತಿಕವಾಗಿಯೂ ಸಹಾಯ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.