ಕರ್ನಾಟಕ

karnataka

ETV Bharat / state

ಕೊಳ್ಳೇಗಾಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ನೇಪಾಳಿ ಯುವಕ - nepali youth committed suicide

ನೇಪಾಳದ ಯುವಕನೋರ್ವ ಕೊಳ್ಳೇಗಾಲದ ಓಂಶಕ್ತಿ ದೇಗುಲ ಸಮೀಪದ ಚಿಲ್ಲರೆ ಅಂಗಡಿ ಮುಂದೆ ನೇಣಿಗೆ ಶರಣಾದ ಘಟನೆ ನಡೆದಿದೆ.

suicide

By

Published : Aug 3, 2019, 8:36 PM IST

ಕೊಳ್ಳೇಗಾಲ: ನೇಪಾಳದ ಯುವಕನೋರ್ವ ಕೊಳ್ಳೇಗಾಲದ ಓಂಶಕ್ತಿ ದೇಗುಲ ಸಮೀಪದ ಚಿಲ್ಲರೆ ಅಂಗಡಿ ಮುಂದೆ ನೇಣಿಗೆ ಶರಣಾದ ಘಟನೆ ನಡೆದಿದೆ.

ನೇಪಾಳ ದೇಶದ ಯುವಕ ಅತಿನ್ ಖಡ್ಕ (28) ಮೃತ ದುರ್ದೈವಿ.

ಚಿಲ್ಲರೆ ಅಂಗಡಿಯ ಮುಂಭಾಗದ ಕಬ್ಬಿಣದ ಕೊಕ್ಕೆಗೆ ಪ್ಲಾಸ್ಟಿಕ್ ವೈರ್​ನಿಂದ ನೇಣುಬಿಗಿದುಕೊಂಡಿದ್ದು, ಮೃತನ ಪ್ಯಾಂಟ್ ಜೇಬಿನಲ್ಲಿ ದೊರೆತ ಪಾಸ್‍ಪೋರ್ಟ್‍ನಿಂದ ಹೆಸರು, ವಿಳಾಸ ತಿಳಿದು ಬಂದಿದೆ.

'ಮೈ ಲೈಫ್​ ಇಸ್ ಎಂಡ್, ಮೈ ಲೈಪ್ ಇಸ್ ಗಾನ್' ಎಂದು ಬರೆದ ಚೀಟಿಯೂ ದೊರೆತಿದೆ. ಸುರಕ್ಷತೆ ಕಾರಣದಿಂದ ಶವವನ್ನು ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿಡಿಲಾಗಿದ್ದು, ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details