ಕರ್ನಾಟಕ

karnataka

ETV Bharat / state

ಜಮೀನಿನ ಬೇಲಿ ವಿಚಾರಕ್ಕೆ ಗಲಾಟೆ: ಜಿ.ಪಂ ಮಾಜಿ ಉಪಾಧ್ಯಕ್ಷೆಯ ತಂದೆ ಕೊಲೆ - ಚಾಮರಾಜನಗರ ಜಿಪಂ ಮಾಜಿ ಉಪಾಧ್ಯಕ್ಷೆ ತಂದೆ ಕೊಲೆ

ಜಮೀನಿನ ಬೇಲಿ ವಿಚಾರಕ್ಕೆ ಗಲಾಟೆ ನಡೆದು ಮಲ್ಲಿಕಾರ್ಜುನ, ಮಲೆಮಾದಪ್ಪ ಹಾಗೂ ಮಂಗಲ ಎಂಬವರು‌ ದೊಣ್ಣೆ, ಮಚ್ಚಿನಿಂದ ಹಲ್ಲೆ ನಡೆಸಿ ವ್ಯಕ್ತಿಯನ್ನು ಕೊಂದಿದ್ದಾರೆ.

ಜಿಪಂ ಮಾಜಿ ಉಪಾಧ್ಯಕ್ಷೆ ತಂದೆ ಕೊಲೆ
ಜಿಪಂ ಮಾಜಿ ಉಪಾಧ್ಯಕ್ಷೆ ತಂದೆ ಕೊಲೆ

By

Published : Jul 6, 2021, 8:11 PM IST

ಚಾಮರಾಜನಗರ: ಜಮೀನಿನ‌ ಬೇಲಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವ ಕೊಲೆಯಾಗಿರುವ ಘಟನೆ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಪಂಚಾಯಿತಿಯ ನಿಕಟಪೂರ್ವ ಉಪಾಧ್ಯಕ್ಷೆ ಶಶಿಕಲಾ ಅವರ ತಂದೆ ಗುರುಸ್ವಾಮಿ (60) ಕೊಲೆಯಾಗಿದ್ದಾರೆ.

ಗುರುಸ್ವಾಮಿ ಅವರ ಪುತ್ರ ಮಂಜುನಾಥ್ ಅವರಿಗೂ ಗಂಭೀರ ಗಾಯಗಳಾಗಿದ್ದು ಮೈಸೂರಿನ‌ ಆಸ್ಪತ್ರೆಗೆ ರವಾನಿಸಲಾಗಿದೆ. ಜಮೀನಿನ ಬೇಲಿ ವಿಚಾರಕ್ಕೆ ಗಲಾಟೆ ನಡೆದು ಮಲ್ಲಿಕಾರ್ಜುನ, ಮಲೆಮಾದಪ್ಪ ಹಾಗೂ ಮಂಗಲ ಎಂಬವರು‌ ದೊಣ್ಣೆ, ಮಚ್ಚಿನಿಂದ ಹಲ್ಲೆ ನಡೆಸಿ ಗುರುಸ್ವಾಮಿಯನ್ನು ಹತ್ಯೆ ಮಾಡಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಊರಿನಲ್ಲೇ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ : ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಕೊಲೆ : ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ

For All Latest Updates

ABOUT THE AUTHOR

...view details