ಕರ್ನಾಟಕ

karnataka

By

Published : Jun 1, 2022, 1:12 PM IST

ETV Bharat / state

ಜಿಲ್ಲಾಡಳಿತ, ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್​​​: ಸೋಲಿಗ ಜನರ ನೆರವಿಗೆ ಮಲ್ಟಿ ಪರ್ಪಸ್ ವಾಹನ

'ಜನ ವನ ಸೇತುವೆ' ಎಂದರೆ ಹಲವು ಅವಶ್ಯಕತೆ ಈಡೇರಿಸುವ ವಾಹನ(ಮಲ್ಟಿ ಪರ್ಪಸ್ ವೈಕಲ್). ಕಾಡಿನೊಳಗೆ ಜೀವಿಸುವ ಸೋಲಿಗ ಜನರ ಕಷ್ಟಕ್ಕೆ ಸ್ಪಂದಿಸುವ ಸಂಚಾರ ಸಾರಿಗೆಯಾಗಿದೆ.

Chamrajnagar
ಡಿಸಿಎಫ್ ಏಡುಕುಂಡಲು

ಕೊಳ್ಳೇಗಾಲ(ಚಾಮರಾಜನಗರ):ಸುಸಜ್ಜಿತ ರಸ್ತೆ, ಸಾರಿಗೆ, ಮೂಲ ಸೌಕರ್ಯಗಳು ಸಿಗದೆ ನಿತ್ಯ ಒಂದಲ್ಲ ಒಂದು ಸಂಕಷ್ಟ ಅನುಭವಿಸುವ ಕಾಡಿನ ಜನರಿಗೆ ಅನುಕೂಲವಾಗವಂತೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಯೋಜನೆ‌ಯೊಂದನ್ನು ಜಾರಿಗೆ ತಂದಿದೆ. ಗಿರಿ ಜನರಿಗೆ ಬಂದೊದಗುವ ಸಂಕಷ್ಟ ನಿವಾರಿಸಲು 'ಜನ ವನ ಸೇತುವೆ' ಎಂಬ ಮಹತ್ತರವಾದ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಸೋಲಿಗ ಜನ ಜೀವನಕ್ಕೆ ಬಹಳ ಉಪಯೋಗಕಾರಿ.

ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಡಿಸಿಎಫ್ ಏಡುಕುಂಡಲು

ಜನ ವನ ಸೇತುವೆ ಎಂದರೆ ಹಲವು ಅವಶ್ಯಕತೆ ಈಡೇರಿಸುವ ವಾಹನ(ಮಲ್ಟಿ ಪರ್ಪಸ್ ವೈಕಲ್). ಕಾಡಿನೊಳಗೆ ಜೀವಿಸುವ ಸೋಲಿಗ ಜನರ ಕಷ್ಟಕ್ಕೆ ಸ್ಪಂದಿಸುವ ಸಂಚಾರ ಸಾರಿಗೆಯಾಗಿದೆ. ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಕಾಡಂಚಿನ ಗ್ರಾಮಗಳಲ್ಲಿ ಈ ವಾಹನ ಕಾರ್ಯನಿರ್ವಹಿಸಲಿದ್ದು, ಸೋಲಿಗ ಜನರ ಸೇವೆಗೆ ನಿಲ್ಲುತ್ತದೆ. ಸಾರಿಗೆ ಸಂಪರ್ಕ ವ್ಯವಸ್ಥೆಯೇ ಇಲ್ಲದ ಗ್ರಾಮಗಳಿಗೆ ನಾಲ್ಕು ಭಾಗಗಳಾಗಿ ವಿಂಗಡಿಸಿ ವಾಹನ ಸೌಲಭ್ಯ ಒದಗಿಸಲಾಗುತ್ತಿದೆ.

ಮುಖ್ಯ ರಸ್ತೆಗಳಿಂದ ಕಾಡಂಚಿನ ಗ್ರಾಮಗಳಿಗೆ ಜನರನ್ನು ಡ್ರಾಪ್, ಪಿಕ್ ಆಪ್ ಮಾಡುವ ಕೆಲಸವನ್ನು ವಾಹನ ನಿರ್ವಹಿಸಲಿದೆ. ಅಲ್ಲದೇ ಪೋಡುಗಳಲ್ಲಿರುವ ಶಾಲೆಗೆ ತೆರಳುವ ಶಿಕ್ಷಕರು, ಪಡಿತರ ಸಾಗಣೆ, ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ನಂತೆ ಈ ವಾಹನ ನೆರವಾಗಲಿದೆ.

ಕಾಡು ಪ್ರಾಣಿ ದಾಳಿ ಪ್ರಕರಣಕ್ಕೆ ಕಡಿವಾಣ: ಕಾಡಿನೊಳಗೆ ಗ್ರಾಮಕ್ಕೆ ನಡೆದು ಹೋಗುವಾಗ ಕಾಡು ಪ್ರಾಣಿಗಳು ದಾಳಿ ನಡೆಸುವ ಉದಾಹರಣೆಗಳಿದೆ. ಇಂತಹ ಅವಘಡ ನಿಯಂತ್ರಣಕ್ಕೂ ಈ ವಾಹನ ವ್ಯವಸ್ಥೆ ಸಹಕಾರಿಯಾಗಲಿದೆ. ಗಿರಿಜನರ ಸೇವೆಗೆ ಬಿಡಲಾಗಿರುವ ಈ ವಾಹನ ಸೌಲಭ್ಯವನ್ನು ಲೋಕಾರ್ಪಣೆ ‌ಮಾಡಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಮುಂದಾಗಿದೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಡಿಸಿಎಫ್ ಏಡುಕುಂಡಲು, ಜನ‌ ವನ ಸೇತುವೆ ಯೋಜನೆ ಉದ್ದೇಶ ಕಾಂಡಚಿನ ಗ್ರಾಮಗಳ ಜನರಿಗೆ ವಾಹನ ನೆರವು ನೀಡುವುದಾಗಿದೆ. ಸಂಪೂರ್ಣ ಸಾರಿಗೆ ವ್ಯವಸ್ಥೆ ರಹಿತ‌ ಗ್ರಾಮಗಳಿಗೆ ಈ ಸೇವೆ ನೀಡಲಾಗಿದ್ದು, ನಾಲ್ಕು ಮಾರ್ಗಗಳನ್ನು ಗುರುತಿಸಲಾಗಿದೆ.

ಮೊದಲನೆಯದಾಗಿ ಪಡಸಲನಾಥ, ಪಾಲರ್, ಮ.ಬೆಟ್ಟ, ಎರಡನೇದಾಗಿ ಮೆದಗಲಾನೆ ಬೆಟ್ಟ, ತೊಲಸಕೆರೆ, ಹಿಂಡಿಗನಾಥ, ನಾಗಮಲ, ಮೂರನೇದಾಗಿ ಬೆಟ್ಟ, ಕೊಕ್ಕಬೆರೆ, ತೋಕೆರೆ, ದೊಡ್ಡಾನೆ, ಮಾರ್ಟಳಿ ವಾಹನ ನಿಯೋಜಿಸಲಾಗಿದೆ. ನಾಲ್ಕನೇಯದಾಗಿ ಪಚ್ಚದೊಡ್ಡಿ, ಕಾಂಚಳಿ, ಅಜ್ಜಿಪುರ ಗ್ರಾಮಗಳಿಗೆ ವಾಹನ ನಿಯೋಜಿಸಲಾಗಿದೆ ಎಂದರು.

ABOUT THE AUTHOR

...view details