ಕರ್ನಾಟಕ

karnataka

ETV Bharat / state

ಎಂಎಲ್​ಎ ಪವರ್ ಅಂದ್ರೆ ಏನು ಗೊತ್ತಾ ನಿಮಗೆ; ಶಾಸಕ ಆರ್​.ನರೇಂದ್ರಗೆ ಜೆಡಿಎಸ್​ ಕಾರ್ಯಕರ್ತರು ಪ್ರಶ್ನೆ - mla R.narendra

ಕೆರೆ ಒಡೆದು ಜಮೀನಿಗೆ ನೀರು ನುಗ್ಗಿದ್ದರಿಂದ ಸ್ಥಳಕ್ಕೆ ಹನೂರು ಶಾಸಕ ಆರ್​.ನರೇಂದ್ರ ಭೇಟಿ ನೀಡಿದ್ದರು. ಈ ವೇಳೆ ಜೆಡಿಎಸ್​ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕರ್ತರು ಶಾಸಕರಿಗೆ ಮುತ್ತಿಗೆ ಹಾಕಿದ್ದಾರೆ.

mla R.Narendra visit to palya village today
ಎಂಎಲ್​ಎ ಪವರ್ ಅಂದ್ರೆ ಏನು ಗೊತ್ತಾ ನಿಮಗೆ; ಶಾಸಕ ಆರ್​.ನರೇಂದ್ರಗೆ ಜೆಡಿಎಸ್​ ಕಾರ್ಯಕರ್ತರು ಪ್ರಶ್ನೆ

By

Published : Sep 19, 2020, 6:17 PM IST

Updated : Sep 19, 2020, 6:52 PM IST

ಕೊಳ್ಳೇಗಾಲ(ಚಾಮರಾಜನಗರ):ತಾಲೂಕಿನ ಪಾಳ್ಯ ಗ್ರಾಮದಲ್ಲಿ ಈಚೆಗೆ ಕೆರೆ ಒಡೆದು ಅನಾಹುತ ಉಂಟಾಗಿತ್ತು. ಇದನ್ನು ವೀಕ್ಷಿಸಲು ಸ್ಥಳಕ್ಕೆ ಭೇಟಿ ನೀಡಿದ ಹನೂರು ಶಾಸಕ‌ ನರೇಂದ್ರ ಅವರಿಗೆ ರೈತರು ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಇದೇ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಹಾಗೂ ಕಾರ್ಯಕರ್ತರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 13 ವರ್ಷಗಳಿಂದ ಶಾಸಕರಾಗಿ ಹನೂರು ಭಾಗದ ರಸ್ತೆ ಕಾಮಗಾರಿ ಅಭಿವೃದ್ಧಿ ಪಡಿಸಲು ವಿಫಲರಾಗಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಭಾಗದಲ್ಲಿ ನಿಮ್ಮ ಸಾಧನೆ ಅಥವಾ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು.

ಎಂಎಲ್​ಎ ಪವರ್ ಅಂದ್ರೆ ಏನು ಗೊತ್ತಾ ನಿಮಗೆ; ಶಾಸಕ ಆರ್​.ನರೇಂದ್ರಗೆ ಜೆಡಿಎಸ್​ ಕಾರ್ಯಕರ್ತರು ಪ್ರಶ್ನೆ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಮಾಡಬಹುದಿತ್ತು. ಆದರೆ, ಆ ಕೆಲಸ ಮಾಡಲಿಲ್ಲ, ಸುಮ್ಮನೆ ಶಾಸಕರಾಗಿದ್ದೀರಿ. ಎಂಎಲ್​ಎ ಪವರ್ ಅಂದ್ರೆ ಏನು ಗೊತ್ತಾ ನಿಮಗೇ? ನೀವು ರಾಜೀನಾಮೆ ಕೊಡಿ ಎಂದು ಜೆಡಿಎಸ್ ಮುಖಂಡ ಮಂಜೇಶ್ ಗೌಡ ವ್ಯಂಗ್ಯವಾಡಿದರು. ಇದಕ್ಕೆ ಶಾಸಕ ಕೋಪದಲ್ಲಿ ಪ್ರತಿಕ್ರಿಯಿಸಿ ಅಲ್ಲಿಂದ ತೆರಳಿದ್ದಾರೆ.

Last Updated : Sep 19, 2020, 6:52 PM IST

ABOUT THE AUTHOR

...view details