ಕರ್ನಾಟಕ

karnataka

ETV Bharat / state

ಆರ್‌ಎಸ್‌ಎಸ್‌ನಲ್ಲಿ ನಾಯಕತ್ವ ಪೈಪೋಟಿ ಇಲ್ಲ: ಶಾಸಕ ಎನ್.ಮಹೇಶ್ - Etv Bharat Kannada

ಯಾರಾದರು ಆರ್​ಎಸ್​​ಎಸ್ ವಿರುದ್ಧ ಹೇಳಿಕೆ ನೀಡಿದರೆ ಅದಕ್ಕೆ ಕಾರ್ಯಕರ್ತರು ಮಾತಿನ ಮೂಲಕ ಪ್ರತಿಕ್ರಿಯೆ ನೀಡಲ್ಲ, ಬದಲಿಗೆ ಕಾರ್ಯದ ಮೂಲಕ ಪ್ರ​​ತಿಕ್ರಿಯಿಸುತ್ತಾರೆ ಎಂದು ಶಾಸಕ ಎನ್​.ಮಹೇಶ್​ ಹೇಳಿದರು.

n.mahesh
ಶಾಸಕ ಎನ್.ಮಹೇಶ್

By

Published : Jul 27, 2022, 7:16 AM IST

ಚಾಮರಾಜನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ(ಆರ್‌ಎಸ್ಎಸ್‌) ನಾಯಕತ್ವ ಪೈಪೋಟಿಯಿಲ್ಲ ಎಂದು ಶಾಸಕ ಎನ್.ಮಹೇಶ್ ಹೇಳಿದರು. ನಗರದಲ್ಲಿ ಮಂಗಳವಾರ 'ರಾಷ್ಟ್ರತಪಸ್ವಿ ಶ್ರೀ ಗುರೂಜಿ' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆರ್‌ಎಸ್‌ಎಸ್‌ ಶತಮಾನದ ಹೊಸ್ತಿಲಲ್ಲಿದೆ. ಇಷ್ಟು ವರ್ಷಗಳ ಕಾಲ ಸಂಘಟನೆ ವಿಘಟನೆಯಾಗದೇ ಉಳಿದಿರುವುದೇ ನನ್ನಲ್ಲಿ ಕುತೂಹಲ ಹುಟ್ಟಿಸಿದೆ. ಇದಕ್ಕೆ ಸಂಘದಲ್ಲಿ ನಾಯಕತ್ವದ ಪೈಪೋಟಿ ಇಲ್ಲದಿರುವುದು ಮತ್ತು ಸರಸಂಘಚಾಲಕರು ಕೂಡ ಕಾರ್ಯಕರ್ತರಾಗಿಯೇ ದುಡಿಯುವುದು ಕಾರಣ ಎಂದರು.

ಆರ್​ಎಸ್​ಎಸ್‌ ನೂರರ ಸಾಮೀಪ್ಯಕ್ಕೆ ಬರುವ ಮುನ್ನ ಹಲವು ಸಂಶಯಗಳಿತ್ತು. ಇನ್ನೂ ಅಧ್ಯಯನ ಮಾಡಬೇಕಿರುವುದರಿಂದ ಈಗಲೂ ಸಂಶಯಗಳಿವೆ. ಆದರೆ ಪೂರ್ವಾಗ್ರಹಗಳಿಲ್ಲ, ಮುಕ್ತ ಮನಸ್ಸಿನಿಂದ ವಿಚಾರಗಳನ್ನು ಗ್ರಹಿಸುತ್ತಿದ್ದೇನೆ.

ಆರ್​ಎಸ್​ಎಸ್‌ ಪೂರ್ಣಾವಧಿ ಕಾರ್ಯಕರ್ತರ ಬದ್ಧತೆ, ಶ್ರದ್ಧೆ ಮೆಚ್ಚಬೇಕಾದದ್ದು ಮತ್ತು‌ ಅದು ಪ್ರಶ್ನಾತೀತ. 1925ರ ಮನಸ್ಥಿತಿ ಈಗಿಲ್ಲ. ಆದರೆ ಅವರ ಧ್ಯೇಯ, ಶ್ರದ್ಧೆ, ಗುರಿ ಬದಲಾಗಿಲ್ಲ. ಅಪ್​ಡೇಟ್ ಆಗುತ್ತಲೇ ಇದ್ದಾರೆ. ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್​ಎಸ್​ಎಸ್‌ ಬಗ್ಗೆ ಯಾರಾದರು ಕೊಂಕು ಮಾತನಾಡಿ, ಬೈದರೂ ಕಾರ್ಯಕರ್ತರು ಪ್ರತಿಕ್ರಿಯಿಸಲ್ಲ. ಆದರೆ ಕೆಲಸದ ಮೂಲಕ ಉತ್ತರಿಸುತ್ತಾರೆ. ಆರ್​ಎಸ್​ಎಸ್‌ ಚಳವಳಿ ಪ್ರತಿಕ್ರಿಯೆ ಕೊಡುತ್ತಾ ಕೂರುವ ಪ್ರತಿಕ್ರಿಯಾತ್ಮಕ ಚಳವಳಿಯಲ್ಲ, ಕೆಲಸ ಮಾಡುವ ಕ್ರಿಯಾತ್ಮಕ ಚಳವಳಿ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ವಿಜಯೇಂದ್ರ ಅವರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ಅವಕಾಶ ಮಾಡಿಕೊಡಲಿದೆ : ಸಚಿವ ಸುಧಾಕರ್

ABOUT THE AUTHOR

...view details