ಚಾಮರಾಜನಗರ:ಕೋವಿಡ್ 19 ತಡೆಗಟ್ಟಲು ಒಂದೆಡೆ ಡಿಸಿ ಹಾಗೂ ಎಸ್ಪಿ ಜೊತೆಗಿದ್ದರೆ ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಮುನ್ನೆಚ್ಚರಿಕೆ ಪರಿಶೀಲನೆಗಾಗಿಯೇ 5 ಬಾರಿ ಸೇರಿದಂತೆ ಜಿಲ್ಲೆಗೆ 15ನೇ ಬಾರಿ ಭೇಟಿ ನೀಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ತಮಿಳುನಾಡು, ಕೇರಳ ಗಡಿ ಹಂಚಿಕೊಳ್ಳುವ ಜೊತೆಗೆ ಮಗ್ಗಲಿನಲ್ಲಿ ಕೆಂಡ ಇಟ್ಟುಕೊಂಡಂತೆ 30 ಕಿಮಿ ದೂರದಲ್ಲೇ ಜುಬಿಲಿಯೆಂಟ್ ಕಂಪನಿ ಇದ್ದರೂ ಚಾಮರಾಜನಗರ ಸೇಫಾಗಿರುವಂತೆ ಮಾಡುವಲ್ಲಿ ಡಿಸಿ ಡಾ.ಎಂ.ಆರ್.ರವಿ ಹಾಗೂ ಎಸ್ಪಿ ಎಚ್.ಡಿ.ಆನಂದಕುಮಾರ್ ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲೆಗೆ ಆಗಾಗ್ಗೆ ಭೇಟಿ ಕೊಡುತ್ತಿರುವುದು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಬಿಗಿಯಾಗಲು ಕಾರಣರಾಗಿದ್ದಾರೆ ಎಂಬುದು ಜನರ ಅಭಿಮತ.