ಕರ್ನಾಟಕ

karnataka

ETV Bharat / state

ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಪೂಜಾರಿ ಗರಂ.. ಸಭೆಗೆ ಬರದ ಇಂಜಿನಿಯರ್​ಗೆ ನೋಟಿಸ್.. - Mujarai Department Progress review meeting

ಕಡಿಮೆ ಜನರು ಸೇರಬೇಕು. ಆರ್ಥಿಕವಾಗಿ ಕಷ್ಟದಲ್ಲಿರುವವರು ವಿವಾಹ ಮಾಡಲಾಗದ ಪರಿಸ್ಥಿತಿ ಬರಬಾರದೆಂದು ಸಪ್ತಪದಿ ಯೋಜನೆ ಜಾರಿಯಾಗಿದೆ. ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು, ಕೋವಿಡ್ ನಿಯಮ ಪಾಲಿಸಿಕೊಂಡು, ಸಪ್ತಪದಿ ಕಾರ್ಯಕ್ರಮ ನಡೆಸಿ ಎಂದು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಡಿಸಿಗೆ ಸೂಚಿಸಿದರು..

minister-kota-srinivas-poojary-outrage-against-officials-in-chamarajanagara
ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ

By

Published : Jul 16, 2021, 10:14 PM IST

ಚಾಮರಾಜನಗರ :ಇಂದು ಜಿಲ್ಲಾಡಳಿತ ಭವನದಲ್ಲಿ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಧಿಕಾರಿಗಳ ಕಾರ್ಯ ವೈಖರಿಗೆ ಗರಂ ಆಗಿದ್ದಾರೆ.

ಗ್ರಾಪಂ ಕೆಲಸ ಆಗಬೇಕೆಂದರೂ ಫಾಲೋಅಪ್ ಮಾಡಬೇಕು. ಮುಖ್ಯ ಕಾರ್ಯದರ್ಶಿ ಅವರು ಅಪ್ರೂವಲ್‌ಗಾಗಿ 8 ತಿಂಗಳು ಕಾಲ ಕಾಯುತ್ತಾ ಕುಳಿತರೇ ಹೇಗೆ? ಎಂದು ಪ್ರಶ್ನಿಸಿದರು. ಇದೇ ವೇಳೆ ಸಭೆಗೆ ಗೈರಾಗಿದ್ದ ಕಾರ್ಯಪಾಲಕ ಅಭಿಯಂತರರ ಕುರಿತು ಕೂಡಲೇ ಅವರಿಗೆ ನೋಟಿಸ್ ಕೊಡಿ, ಮಿನಿಸ್ಟರ್ ಬಂದ್ರೂ ಅಧಿಕಾರಿಗಳು ಬರದಿದ್ದರೆ ಹೇಗೆ? ಎಂದು ಡಿಸಿಗೆ ಸೂಚಿಸಿದರು.

ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ..

ದೇವಾಲಯಗಳ ಅಭಿವೃದ್ಧಿಗೆ ಸಾರ್ವಜನಿಕ ಸಹಯೋಗ ಅತ್ಯಗತ್ಯ. ಸಮಿತಿಗಳನ್ನು ಮಾಡಿಕೊಂಡು ಭಕ್ತಾದಿಗಳ ಸಹಕಾರ ಪಡೆದು, ಅಭಿವೃದ್ಧಿಗೊಳಿಸಬೇಕು. ಎಲ್ಲವನ್ನು ಸರ್ಕಾರವೇ ಮಾಡಲಾಗಲ್ಲ. ಖಾಸಗಿ ಟ್ರಸ್ಟ್‌ಗಳು ನಡೆಸುವ ದೇಗುಲಗಳು ಅಭಿವೃದ್ಧಿಯಾಗುತ್ತಿಲ್ಲವೇ?. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಆದಾಯದ ದಾರಿ ಕಂಡುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸುಳ್ವಾಡಿ ಗ್ರಾಮದಲ್ಲಿ ಹಿಂದೂ ದೇವಾಲಯಕ್ಕೆ ಸೇರಿದ್ದ ಜಾಗದಲ್ಲಿ ಚರ್ಚ್ ಸ್ಥಾಪನೆಯಾಗುತ್ತಿರುವ ವಿಚಾರದ ಕುರಿತು ಡಿಸಿ ಅವರಿಂದ ಮಾಹಿತಿ ಪಡೆದರು. ನಂತರ ಈ ಬಗ್ಗೆ ಮಾತನಾಡಿ, ದೇವಾಲಯ ಆಸ್ತಿಯನ್ನು ಸಂರಕ್ಷಣೆ ಮಾಡಲಾಗುವುದು. ಚಾಮರಾಜೇಶ್ವರ ದೇವಾಲಯಕ್ಕೆ ಸೇರಿದ ಆಸ್ತಿಯನ್ನು ಸರ್ವೇ ಮಾಡಿಸಲಾಗುವುದು ಎಂದರು.

ಕಡಿಮೆ ಜನರು ಸೇರಬೇಕು. ಆರ್ಥಿಕವಾಗಿ ಕಷ್ಟದಲ್ಲಿರುವವರು ವಿವಾಹ ಮಾಡಲಾಗದ ಪರಿಸ್ಥಿತಿ ಬರಬಾರದೆಂದು ಸಪ್ತಪದಿ ಯೋಜನೆ ಜಾರಿಯಾಗಿದೆ. ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು, ಕೋವಿಡ್ ನಿಯಮ ಪಾಲಿಸಿಕೊಂಡು, ಸಪ್ತಪದಿ ಕಾರ್ಯಕ್ರಮ ನಡೆಸಿ ಎಂದು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ಡಿಸಿಗೆ ಸೂಚಿಸಿದರು.

ಓದಿ:ಕೆಎಸ್​​ಆರ್​​​ಪಿ: 10 ಕೆ.ಜಿಗಿಂತ ಹೆಚ್ಚು ತೂಕ ಇಳಿಸಿದ ಪೊಲೀಸ್‌ ಸಿಬ್ಬಂದಿಗೆ ಪ್ರಶಂಸನಾ ಪತ್ರ

ABOUT THE AUTHOR

...view details