ಕರ್ನಾಟಕ

karnataka

ETV Bharat / state

ಮೈನಿಂಗ್ ಡಿಡಿ ವಿರುದ್ಧ ಸಚಿವ, ಕಾರ್ಯದರ್ಶಿ ಕಿಡಿಕಿಡಿ; ಡಿಡಿಪಿಐ ಕಾರ್ಯಕ್ಕೂ ಚಾಟಿ! - ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್

ರಾಯಲ್ಟಿ, ಪೆನಾಲ್ಟಿ ಸಂಗ್ರಹಿಸಿರುವಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಾಗಭೂಷಣ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ' ನಿಮ್ಮ ಕೆಲ್ಸ ಏನಪ್ಪ, ನೀವೆ ಪೆನಾಲ್ಟಿ ಹಾಕಿ , ಸುಮ್ಮನೆ ಕುಳಿತರೇ ಸರ್ಕಾರಕ್ಕೆ ಆದಾಯ ಬರುವುದು ಯಾವಾಗ ಎಂದು ಪ್ರಶ್ನಿಸಿ ಸಚಿವರು ತರಾಟೆಗೆ ತೆಗೆದುಕೊಂಡರು.

ಮೈನಿಂಗ್ ಡಿಡಿ ವಿರುದ್ಧ ಸಚಿವ, ಕಾರ್ಯದರ್ಶಿ ಕಿಡಿಕಿಡಿ
ಮೈನಿಂಗ್ ಡಿಡಿ ವಿರುದ್ಧ ಸಚಿವ, ಕಾರ್ಯದರ್ಶಿ ಕಿಡಿಕಿಡಿ

By

Published : Feb 6, 2022, 6:59 AM IST

ಚಾಮರಾಜನಗರ: ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ನಗರದಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಗಣಿ ಇಲಾಖೆ ಡಿಡಿಯ ಬೆವರಳಿಸಿದರು.

ರಾಯಲ್ಟಿ, ಪೆನಾಲ್ಟಿ ಸಂಗ್ರಹಿಸಿರುವಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ್ದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಾಗಭೂಷಣ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ' ನಿಮ್ಮ ಕೆಲ್ಸ ಏನಪ್ಪ, ನೀವೆ ಪೆನಾಲ್ಟಿ ಹಾಕಿ , ಸುಮ್ಮನೆ ಕುಳಿತರೇ ಸರ್ಕಾರಕ್ಕೆ ಆದಾಯ ಬರುವುದು ಯಾವಾಗ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಬಳಿಕ, ಸಚಿವರ ಯಾವೊಂದು ಪ್ರಶ್ನೆಗೂ ಸಮರ್ಪಕ ಅಂಕಿ-ಅಂಶವಿಲ್ಲದೇ ಪರದಾಡುತ್ತಿದ್ದನ್ನು ಗಮನಿಸಿದ ಸಚಿವ, ಮಾಹಿತಿ ಪಡೆಯದೇ ಸಭೆಗೆ ಏಕೆ ಬರುತ್ತೀರಿ, ಚಾಮರಾಜನಗರದಿಂದ ಹೊರದೇಶಕ್ಕೆ ಎಷ್ಟು ಕರಿಕಲ್ಲುಗಳು ರಫ್ತಾಗುತ್ತದೆ ಎಂಬ ಮಾಹಿತಿ ನೀವು ಪಡೆದಿದ್ದರೇ ಉದ್ಯಮಿಗಳ ಕಳ್ಳಾಟ ತಿಳಿಯುತ್ತಿತ್ತು, ಯಾವ ಮಾಹಿತಿಯೂ ಇಲ್ಲವಲ್ಲ ಎಂದು ಸಿಡಿಮಿಡಿಗೊಂಡರು.

ಮರಳು ಗಣಿಗಾರಿಕೆ ನಡೆಸಲು ನೀವೆ ಸ್ಥಳ ಗುರುತಿಸಿ, ನೀವೆ ಅದನ್ನು ರಿಜೆಕ್ಟ್ ಮಾಡಿದ್ದೀರಿ. ತಾಲೂಕು ಟಾಸ್ಕ್ ಒಪ್ಪದಿದ್ದರೇ ಮನವೊಲಿಸುವ ಕೆಲಸ ಮಾಡಬೇಕು. ಕಡಿಮೆ ಬೆಲೆಗೆ ಮರಳು ಸಿಕ್ಕರೇ ಬಡವರಿಗೆ ಅನೂಕೂಲವಾಗುವುದಿಲ್ಲವೇ ಎಲ್ಲರೊಟ್ಟಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದರು.

ಇನ್ನು, ಪಿಪಿಟಿ ಪ್ರಸ್ತುತ ಪಡಿಸುವಾಗ 6 ವರ್ಷಗಳ ಹಿಂದಿನ ಮಾಹಿತಿಯನ್ನೆಲ್ಲಾ ಸೇರಿಸಿ ಮೇಲೋಗರ ಮಾಡಿದ್ದಕ್ಕೆ ಮತ್ತೇ ಸಚಿವರು ಮತ್ತು ಇಲಾಖೆ ಉನ್ನತ ಅಧಿಕಾರಿಗಳಿಂದ ಬೈಸಿಕೊಂಡರು.

ಅಪೂರ್ಣ ಮಾಹಿತಿಗೆ ಚಾಟಿ:

ಅಂಗನವಾಡಿ ಕೇಂದ್ರಗಳನ್ನು ಶಾಲಾವರಣಕ್ಕೆ ತರಲು, ಆಹಾರ ಪೌಷ್ಠಿಕತೆ ಪರೀಕ್ಷೆ, ಅಂಗನವಾಡಿ ಕಟ್ಟಡಗಳ ಬಗ್ಗೆ ಅಪೂರ್ಣ ಮಾಹಿತಿ ಹೊಂದಿದ್ದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅವರಿಗೂ ಸಚಿವರು ಚಾಟಿ ಬೀಸಿದರು.

ತೀವ್ರ ಅಪೌಷ್ಟಿಕತೆಯಿಂದ 116 ಮಕ್ಕಳು ಬಳಲುತ್ತಿದ್ದು, 19 ಮಕ್ಕಳು ಗುಣಮುಖರಾಗಿದ್ದಾರೆ ಎಂದು ಸಭೆಗೆ ಡಿಡಿ ಮಾಹಿತಿ ನೀಡುತ್ತಿದ್ದಂತೆ, ಎಲ್ಲಾ ಮಕ್ಕಳ ಮೇಲೆ ನಿರಂತರ ನಿಗಾ ಇಡಿ, ಒಂದು ಮಗುವಿಗೆ ಏನಾದರೂ ಹೆಚ್ಚುಕಮ್ಮಿ ಆದರೂ ರಾಜ್ಯದಲ್ಲಿ ನಿಮ್ಮಗಳ ವಿರುದ್ಧ ಕೆಟ್ಟ ಅಭಿಪ್ರಾಯ ಬರಲಿದೆ ಎಂದು ಎಚ್ಚರಿಸಿದರು.

For All Latest Updates

TAGGED:

ABOUT THE AUTHOR

...view details