ಚಾಮರಾಜಗರ:ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆ ಬೇಟೆಯಾಡಿ ತಲೆ ಮರೆಸಿಕೊಡಿದ್ದ ಆರೋಪಿಯನ್ನ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಂಡ ಬಂಧಿಸಿದೆ.
ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆಗಳ ಬೇಟೆ.. ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ - Bandipur of Gundlupet Taluk
ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆ ಬೇಟೆಯಾಡಿ ತಲೆ ಮರೆಸಿಕೊಡಿದ್ದ ಆರೋಪಿಯನ್ನ ಗುರುವಾರ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಂಡ ಬಂಧಿಸಿದೆ.
![ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆಗಳ ಬೇಟೆ.. ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ Man arrested for hunting deer](https://etvbharatimages.akamaized.net/etvbharat/prod-images/768-512-6918184-1096-6918184-1587708919056.jpg)
ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆ ಬೇಟೆ..ಓರ್ವ ಅರೆಸ್ಟ್
ಹಗ್ಗದಹಳ್ಳ ಗ್ರಾಮದ ಕೃಷ್ಣ ಬಂಧಿತ ಆರೋಪಿ. ಈತ ಮತ್ತು ಸಹಚರರು ಏಪ್ರಿಲ್ 17ರಂದು ಮೂರು ಜಿಂಕೆಗಳನ್ನು ಬೇಟೆಯಾಡಿ, ಮಾಂಸ ಹಂಚಿಕೊಂಡಿದ್ದರು. ವಿಷಯ ತಿಳಿದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 7 ಮಂದಿಯನ್ನ ಬಂಧಿಸಿದ್ದರು. ಒಬ್ಬ ತಲೆ ಮರೆಸಿಕೊಂಡಿದ್ದು, ಆತನನ್ನ ನಿನ್ನೆ ಬಂಧಿಸಲಾಗಿದೆ.