ಕರ್ನಾಟಕ

karnataka

ETV Bharat / state

ಮಾದಪ್ಪನ ಬೆಟ್ಟದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಕಳೇಬರ ಪತ್ತೆ - ಮಲೆಮಹದೇಶ್ವರ ವನ್ಯಜೀವಿಧಾಮ

ಮಲೆಮಹದೇಶ್ವರ ವನ್ಯಜೀವಿಧಾಮದ ಮಹದೇಶ್ವರ ಬೆಟ್ಟ ವಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಕಳೇಬರ ಪತ್ತೆಯಾಗಿದ್ದು, ಚಿರತೆಯು ಮೃತಪಟ್ಟು 6-7 ದಿನಗಳ ಮೇಲಾಗಿದೆ ಎಂದು ಶಂಕಿಸಲಾಗಿದೆ.

Leopard's dead body,ಚಿರತೆ ಶವ ಪತ್ತೆ

By

Published : Aug 8, 2019, 9:25 AM IST

ಚಾಮರಾಜನಗರ:ಮಲೆಮಹದೇಶ್ವರ ವನ್ಯಜೀವಿಧಾಮದ ಮಹದೇಶ್ವರ ಬೆಟ್ಟ ವಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಕಳೇಬರ ಪತ್ತೆಯಾಗಿದೆ.

ಚಿರತೆ ಗಂಡಾಗಿದ್ದು, ನಾಲ್ಕರಿಂದ ಐದು ವರ್ಷ ಎಂದು ಅಂದಾಜಿಸಲಾಗಿದೆ. ಚಿರತೆಯು ಮೃತಪಟ್ಟು 6-7 ದಿನಗಳ ಮೇಲಾಗಿದೆ ಎಂದು ಶಂಕಿಸಲಾಗಿದ್ದು, ಮೇಲ್ನೋಟಕ್ಕೆ ಚಿರತೆ ಸಾವು ಸ್ವಾಭಾವಿಕವಾಗಿ ಕಂಡರೂ ವಿಷಪ್ರಶನ ತಳ್ಳಿಹಾಕುವಂತಿಲ್ಲ.

ಈ ಸಂಬಂಧ ಡಿಎಫ್​ಓ ಏಡುಕುಂಡಲು 'ಈಟಿವಿ ಭಾರತ್'​ನೊಂದಿಗೆ ಮಾತನಾಡಿ, ಗುರುವಾರ ಚಿರತೆಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ವರದಿ ಬರುವ ತನಕ ಸಾವಿಗೆ ಕಾರಣ ಹೇಳಲಾಗುವುದಿಲ್ಲ ಎಂದಿದ್ದಾರೆ.

ABOUT THE AUTHOR

...view details