ಕರ್ನಾಟಕ

karnataka

ETV Bharat / state

ಬಂಡೀಪುರದತ್ತ ಪ್ರವಾಸಿಗರ ಲಗ್ಗೆ: ಎರಡೇ ತಿಂಗಳಲ್ಲಿ 2 ಕೋಟಿ ರೂ‌. ಸಂಗ್ರಹ! - undefined

ರಾಷ್ಟ್ರೀಯ ಅಭಯಾರಣ್ಯ ಬಂಡೀಪುರದತ್ತ ಪ್ರವಾಸಿಗರ ದಂಡು. ಎರಡೇ ತಿಂಗಳಿಗೆ 2 ಕೋಟಿ 10 ಲಕ್ಷ ರೂ. ಶುಲ್ಕ ಸಂಗ್ರಹ. ಸರ್ಕಾರದ ಬೊಕ್ಕಸಕ್ಕೆ ಬಂತು ದಾಖಲೆಯ ಹಣ.

Bandipur safari

By

Published : Jun 2, 2019, 10:04 PM IST

ಚಾಮರಾಜನಗರ:ದೇಶದಲ್ಲೇ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಹೆಸರುವಾಸಿಯಾಗಿರುವ ಬಂಡೀಪುರಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೇವಲ 2 ತಿಂಗಳಲ್ಲಿ ದಾಖಲೆಯ ಮೊತ್ತದ ಶುಲ್ಕ ಸಂಗ್ರಹವಾಗಿದೆ.

ಕಳೆದ ಏಪ್ರಿಲ್​ನಲ್ಲಿ 77 ಲಕ್ಷ ಹಾಗೂ ಮೇನಲ್ಲಿ 1.40 ಲಕ್ಷ ಹಣ ಸಂಗ್ರಹವಾಗಿದ್ದು, ಎರಡೇ ತಿಂಗಳಿಗೆ 2 ಕೋಟಿ 10 ಲಕ್ಷ ರೂ. ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಕಳೆದ ವರ್ಷ ಎಂಟೂವರೆ ಕೋಟಿ ಸಂಗ್ರಹವಾಗಿತ್ತು. ಈ ವರ್ಷ ಎರಡೇ ತಿಂಗಳಿಗೆ 2 ಕೋಟಿ ಸಂಗ್ರಹವಾಗಿದ್ದು, ವರ್ಷದ ಆದಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಎನ್ನುವವರು 'ಈಟಿವಿ ಭಾರತ​'ಕ್ಕೆ ಪ್ರತಿಕ್ರಿಯಿಸಿ, ದಾಖಲೆ ಮೊತ್ತ ಹರಿದು ಬಂದು ಸರ್ಕಾರಕ್ಕೆ ಆದಾಯ ತಂದಿರುವುದು ಸಂತೋಷದ ವಿಚಾರವಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ವಾಹನಗಳನ್ನು ಪಾರ್ಕಿಂಗ್​ ಮಾಡಲು ಸ್ವಲ್ಪ ತೊಂದರೆಯಾಗುತ್ತಿದೆ. ಪಾರ್ಕಿಂಗ್ ಸಮಸ್ಯೆ, ಕ್ಯಾಂಪಸ್​ನಲ್ಲಿ ಸಫಾರಿ ಕೌಂಟರ್ ಇಂದಿನಿಂದ ಬದಲಾಗಿದೆ. ಮೊದಲ ದಿನವೇ 28 ಬಸ್​ಗಳು ಫುಲ್ ಆಗಿದ್ದು 4.80 ಲಕ್ಷ ರೂ. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

For All Latest Updates

TAGGED:

ABOUT THE AUTHOR

...view details