ಕರ್ನಾಟಕ

karnataka

ETV Bharat / state

ಕೇರಳ ಲಾಟರಿ ಮಾರಾಟ: 900 ಟಿಕೆಟ್ ಜೊತೆ ಖದೀಮ ಅಂದರ್! - Kerala Lottery Seller arrested,

ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

Kerala Lottery Seller, Kerala Lottery Seller arrested, Kerala Lottery Seller arrested by Chamarajanagar police, ಕೇರಳ ಲಾಟರಿ ಮಾರಾಟಗಾರ, ಕೇರಳ ಲಾಟರಿ ಮಾರಾಟಗಾರ ಬಂಧನ, ಕೇರಳ ಲಾಟರಿ ಮಾರಾಟಗಾರನನ್ನು ಬಂಧಿಸಿದ ಚಾಮರಾಜನಗರ ಪೊಲೀಸ್​,
ಕೇರಳ ಲಾಟರಿ ಮಾರಾಟ ಬಂಧನ

By

Published : Jan 17, 2020, 11:18 PM IST

ಚಾಮರಾಜನಗರ:ಕೂಲಿ ಕಾರ್ಮಿಕರನ್ನೇ ಗುರಿಯಾಗಿಸಿಕೊಂಡು ಕೇರಳದ ಲಾಟರಿ ಮಾರುತ್ತಿದ್ದ ಖತರ್ನಾಕ್ ಖದೀಮನೊಬ್ಬನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.

ಗುಂಡ್ಲುಪೇಟೆಯ ಹಳ್ಳದಕೇರಿಯ ನಾಗೇಶ್ ಅಲಿಯಾಸ್ ಜಿಂಗ (45) ಬಂಧಿತ ಆರೋಪಿ. ಪಟ್ಟಣದ ಹೊರವಲಯದಲ್ಲಿ ಸೊಂಟಕ್ಕೆ ಲಾಟರಿ ಟಿಕೆಟ್ ಕಂತೆಗಳನ್ನು ಸಿಕ್ಕಿಸಿಕೊಂಡು ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪಿಎಸ್ಐ ಲತೇಶ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಖದೀಮನನ್ನು ಬಂಧಿಸಿದ್ದಾರೆ.

ಬಂಧಿತನಿಂದ ಸುಮಾರು 900 ಲಾಟರಿ ವಶಪಡಿಕೊಂಡಿದ್ದು, ಇದರ ಮೌಲ್ಯ ‌40 ಸಾವಿರ ರೂ.ಗೂ ಹೆಚ್ಚಿದೆ ಎನ್ನಲಾಗಿದೆ.

ಈತ ಹಲವು ದಿನಗಳಿಂದಲೂ ಕೇರಳಕ್ಕೆ ಹೋಗಿ ಅಲ್ಲಿಂದ ಕಂತೆ ಕಂತೆ ಲಾಟರಿಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details