ಕರ್ನಾಟಕ

karnataka

By

Published : Sep 2, 2021, 10:59 AM IST

ETV Bharat / state

ಕೇರಳದಿಂದ ಬರುವವರ ಮೇಲೆ ನಿಗಾ, ಸೈಬರ್ ಕೆಫೆ ಮೇಲೆ ಕಣ್ಣಿಡಿ: ಐಜಿಪಿ ಪ್ರವೀಣ್ ಮಧುಕರ್ ಪವಾರ್

ರಾಜ್ಯದಲ್ಲಿ ಕೋವಿಡ್ ಹರಡದಂತೆ ತಡೆಯಲು ಕರ್ನಾಟಕ - ಕೇರಳ ಗಡಿ ಭಾಗದಲ್ಲಿ ಹದ್ದಿನ ಕಣ್ಣಿಡಲಾಗುತ್ತಿದೆ. ಈ ಹಿನ್ನೆಲೆ ಚಾಮರಾಜನಗರ ಗಡಿ ಭಾಗಕ್ಕೆ ಮೈಸೂರು ಸೌತ್ ಝೋನ್ ಐಜಿಪಿ ಪ್ರವೀಣ್ ಮಧುಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Kerala- Karnataka border inspected by IGP Praveen madhukar
ಐಜಿಪಿ ಪ್ರವೀಣ್ ಮಧುಕರ್ ಪವಾರ್

ಚಾಮರಾಜನಗರ: ಕರ್ನಾಟಕ-ಕೇರಳ ಗಡಿಯಾದ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್​ಪೋಸ್ಟ್​ಗೆ ಮೈಸೂರು ದಕ್ಷಿಣ ವಲಯದ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಗೆ ಪ್ರವೇಶಿಸುವ ವಾಹನಗಳ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಎಸ್​​​​ಪಿ ಸೇರಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಂತಾರಾಜ್ಯ ಪ್ರವಾಸಿಗರು, ಪ್ರಯಾಣಿಕರು ಜಿಲ್ಲೆ ಪ್ರವೇಶಿಸುವಾಗ ಆರ್​​ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ವರದಿಯ ನೈಜತೆ ಖಾತರಿಪಡಿಸಿಕೊಳ್ಳುವ ಸಂಬಂಧ ಸಂಪರ್ಕ ಸಾಧನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಐಜಿಪಿ ತಿಳಿಸಿದರು.

ಕೇರಳ ಗಡಿ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿಭಾಗಗಳ ವ್ಯಾಪ್ತಿಯಲ್ಲಿ ಬರುವ ಸೈಬರ್ ಕೆಫೆಗಳ ಮೇಲೆ ವಿಶೇಷವಾಗಿ ನಿಗಾವಹಿಸಿ ಆರ್​​​​ಟಿ-ಪಿಸಿಆರ್ ನಕಲಿ ವರದಿ ಪ್ರಕರಣಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಕೇರಳದಿಂದ ಜಿಲ್ಲೆಗೆ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಎಸ್ಓಪಿ ಪ್ರಕಾರ ಒಂದು ವಾರಗಳ ಅವಧಿಯ ಕ್ವಾರಂಟೈನ್ ಕಡ್ಡಾಯ ನಿಯಮ ಪರಿಪಾಲನೆಯ ಬಗ್ಗೆಯೂ ಅಧಿಕಾರಿಗಳು ಗಮನಹರಿಸಬೇಕು, ಚೆಕ್‍ಪೋಸ್ಟ್​ನಲ್ಲಿ ಸಿಸಿಟಿವಿಗಳನ್ನು ಸುಸ್ಥಿಯಲ್ಲಿಟ್ಟಿರುವಂತೆಯೂ ಸೂಚಿಸಿದ್ದಾರೆ.

ಓದಿ:ಚೀನಾ ವಿರೋಧದ ನಡುವೆಯೂ Pfizer- Bio N-Tech ಲಸಿಕೆ ಆಮದು ಮಾಡಿಕೊಂಡು ತೈವಾನ್

ABOUT THE AUTHOR

...view details