ಕರ್ನಾಟಕ

karnataka

ETV Bharat / state

ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ - ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ

ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀ ಕ್ಷೇತ್ರ ಮಲೆಮಹಾದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು.

ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ
ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ

By

Published : Nov 26, 2019, 7:07 AM IST

ಚಾಮರಾಜನಗರ: ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀಕ್ಷೇತ್ರ ಮಲೆಮಹಾದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು.

ಮಾದಪ್ಪನ ಬೆಟ್ಟದಲ್ಲಿ ಕಾರ್ತಿಕ ಸಂಭ್ರಮ: ಬೆಳಗಿದ ಮಹಾಜ್ಯೋತಿ

ಆನೆ ತಲೆದಿಂಬ ಹಾಗೂ ನಾಗಮಲೆ ನಡುವಿನ ನಡುಮಲೆಯ ದೀಪದ ಒಡ್ಡಿನಲ್ಲಿ 9 ಬಗೆಯ ಕಟ್ಟಿಗೆಗಳಿಂದ ಹೋಮ ಮಾಡಿ, ದೇಗುಲದಿಂದ ಉತ್ಸವಮೂರ್ತಿಯನ್ನು ದೀಪದ ಗಿರಿ ಒಡ್ಡುವಿಗೆ ತಂದು ಪೂಜೆ ಸಲ್ಲಿಸಲಾಯಿತು.

ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದ ಬೆಟ್ಟದಲ್ಲಿ ಸ್ವಾಮಿಗೆ ತೆಪ್ಪೋತ್ಸವ ನಡೆಸಲಾಯಿತು. ಇದೇ ವೇಳೆ, ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ದೇವರಿಗೆ ಬರೋಬ್ಬರಿ 690 ಚಿನ್ನದ ತೇರಿನ ಸೇವೆ ನಡೆಸಿದರು. ಸಾವಿರಾರು ಜನ ಸೇರಿ ದೇವರ ಕೃಪೆಗೆ ಪಾತ್ರರಾದರು.

ABOUT THE AUTHOR

...view details