ಕರ್ನಾಟಕ

karnataka

ETV Bharat / state

ಮೈದುಂಬಿದ ಕಮರಹಳ್ಳಿ ಕೆರೆ... ಬೇಗೂರು-ಸೋಮಹಳ್ಳಿ ಸಂಚಾರ ಬಂದ್ - ತುಂಬಿದ ಕಮರಹಳ್ಳಿ ಕೆರೆ

ಕೆರೆ ತುಂಬಿಸುವ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಕೆರೆ ಮೈದುಂಬಿರುವುದರಿಂದ ಸೋಮಹಳ್ಳಿ- ಬೇಗೂರು ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸೋಮಹಳ್ಳಿ, ಮರಳಾಪುರ, ಕೊಡಗಾಪುರ, ಕಬ್ಬಹಳ್ಳಿ, ಸೀಗೆವಾಡಿ ಗ್ರಾಮಗಳಿಗೆ ಹೋಗುವ ಮಂದಿ ಪಜೀತಿ ಪಡುವಂತಾಗಿದೆ.

Kamarahalli lake is filled: Beguru- Somahalli way closed
ಮೈದುಂಬಿದ ಕಮರಹಳ್ಳಿ ಕೆರೆ... ಬೇಗೂರು-ಸೋಮಹಳ್ಳಿ ಸಂಚಾರ ಬಂದ್

By

Published : Jan 7, 2020, 5:55 AM IST

Updated : Jan 7, 2020, 6:23 AM IST

ಚಾಮರಾಜನಗರ:ಕೆರೆ ತುಂಬಿಸುವ ಯೋಜನೆಯಡಿ ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಕೆರೆ ಮೈದುಂಬಿರುವುದರಿಂದ ಸೋಮಹಳ್ಳಿ- ಬೇಗೂರು ಸಂಚಾರ ಸ್ಥಗಿತಗೊಳಿಸಲಾಗಿದೆ.

ಬೇಗೂರು-ಸೋಮಹಳ್ಳಿ ಮಾರ್ಗ ಕನಕಗಿರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಕೆರೆಯ ನೀರು ಹರಿಯಲು ಶುರುವಾಗಿದ್ದು, ಸಂಪರ್ಕ ಬಂದ್​ ಮಾಡಲಾಗಿದೆ. ಇದರಿಂದಾಗಿ ಸೋಮಹಳ್ಳಿ, ಮರಳಾಪುರ, ಕೊಡಗಾಪುರ, ಕಬ್ಬಹಳ್ಳಿ, ಸೀಗೆವಾಡಿ ಗ್ರಾಮಗಳಿಗೆ ಹೋಗುವ ಮಂದಿ ಪಜೀತಿ ಪಡುವಂತಾಗಿದೆ. ಇನ್ನೂ ಕೆರೆ ಏನಾದರೂ ಪೂರ್ತಿಯಾಗಿ ತುಂಬಿದರೆ ಸ್ಟೇಷನ್​ನ ಒಳಗೆ ನೀರು ನಿಲ್ಲಲಿದೆ.

ಕೆರೆಯ ನೀರು ತುಂಬಿರುವುದರಿಂದ ವಿದ್ಯುತ್ ವಿತರಣಾ ಕೇಂದ್ರಕ್ಕೇನೂ ತೊಂದರೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಟೇಷನ್ ಎಂಜಿನಿಯರ್ ತಿಳಿಸಿದ್ದಾರೆ‌. ಈ ಹಿನ್ನಲೆ ಇನ್ನಾದರೂ ನೂತನ ಸೇತುವೆಯನ್ನು ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Last Updated : Jan 7, 2020, 6:23 AM IST

ABOUT THE AUTHOR

...view details