ಚಾಮರಾಜನಗರ: ಕಾಡಿನ ಮಕ್ಕಳಿಗೂ ಜನತಂತ್ರದ ಹಬ್ಬ ತಮ್ಮದೆಂಬ ಅಭಿಮಾನ ಬಂದು ಮತದಾನ ಮಾಡಬೇಕೆಂಬ ಉದ್ದೇಶದಿಂದ ಜಿಪಂ ಸಿಇಒ ಲತಾಕುಮಾರಿ ವಿನೂತನ ಐಡಿಯಾಗೆ ಮೊರೆ ಹೋಗಿದ್ದಾರೆ.
ಹಾಡಿಗಳಲ್ಲಿ ಸ್ಥಾಪಿಸುವ, ಸಂಪ್ರದಾಯ ಮತ್ತು ಪರಂಪರೆ ಬಿಂಬಿಸುವ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಕೂಡ ಗಿರಿಜನರ ವೇಷ ಭೂಷಣ ಧರಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಗುಂಡ್ಲುಪೇಟೆಯ ಮದ್ದೂರು ಕಾಲನಿ, ಚಾಮರಾಜನಗರದ ಕೆ.ಗುಡಿ, ಹನೂರಿನ ಕೊನನಕೆರೆ ಹಾಗೂ ಬಿಳಿಗಿರಿರಂಗನ ಬೆಟ್ಟದಲ್ಲಿನ ಪುರಾಣಿಪೋಡಿನ ಮತಗಟ್ಟೆಗಳು ಎತ್ನಿಕ್ ಬೂತ್ಗಳಾಗಿವೆ. ಇಲ್ಲಿನ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಗಿರಿಜನರಂತೆ ಸೊಪ್ಪುಗಳು, ಪಕ್ಷಿಗಳ ಗರಿಗಳನ್ನು ಧರಿಸಲಿದ್ದಾರೆ.